ಬೆಳಗಾವಿ (ಸುವರ್ಣಸೌಧ), ಡಿ.11- ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಗಮನಿಸಿದರೆ ಕಾಂಗ್ರೆಸ್ ಪರ ಅಲೆ ಎದ್ದಿದೆ ಎಂಬುದು ಗೊತ್ತಾಗುತ್ತದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ಸುಳ್ಳು ಆಶ್ವಾಸನೆಗಳಿಗೆ, ಪೊಳ್ಳು ಭರವಸೆಗಳಿಗೆ ಜನ ಮನ್ನಣೆ ನೀಡಿಲ್ಲ. ಅಚ್ಚೆ ದಿನ್ ಎಂಬ ಕೇವಲ ಭಾಷಣಗಳಿಗೆ ಆದ್ಯತೆಯನ್ನು ಜನತೆ ನೀಡಿಲ್ಲ ಎಂಬುದು ಈ ಚುನಾವಣಾ ಫಲಿತಾಂಶದಿಂದ ಗೊತ್ತಾಗುತ್ತದೆ ಎಂದು ತಿಳಿಸಿದರು.
ಈ ಚುನಾವಣೆ ಫಲಿತಾಂಶ ಮುಂಬರುವ 2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಆಪರೇಷನ್ ಕಮಲ ಮಾಡುತ್ತೇವೆ ಎಂಬುವವರಿಗೆ ಆಪರೇಷನ್ ಆಗಿ ಹೋಗಿದೆ ಎಂದು ಹೇಳಿದರು.