ಹಿರಿಯ ವಿಡಿಯೋ ಎಡಿಟರ್ ಮಹೇಶ ನಿಧನ

ಬೆಂಗಳೂರು:ನ 19. ನಗರದ ಸುದ್ದಿ ವಾಹಿನಿಯೊಂದರಲ್ಲಿ ವಿಡಿಯೋ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಎಂ. ಮಹೇಶ್ (36) ಕಳೆದ ಬುಧವಾರ ಹೃದಯಘಾತದಿಂದ ನಿಧನರಾದರು. ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಬಳಿಯ ಮದನೆ ಗ್ರಾಮದ ಮಹೇಶ್, ನಗರದ ಬಾಗಲಗುಂಟೆಯಲ್ಲಿ ವಾಸಿಸುತ್ತಿದ್ದರು. ವಾರದ ಹಿಂದೆ ಲಘುವಾಗಿ ಎದೆ ನೋವು ಕಾಣಿಸಿಕೊಂಡಿದ್ದು, ವೈದ್ಯರಿಂದ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಎಂದಿನಂತೆ ಕಾರ್ಯನಿರ್ವಹಿಸಿ ರಾತ್ರಿ ಮನೆಗೆ ಬಂದು ಮಲಗಿದ್ದ ಮಹೇಶ್, ಬೆಳಗ್ಗೆ ಎದ್ದಾಗ ಮತ್ತೇ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಸಮಿಪದ ಅಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ರಾಜ್ ನ್ಯೂಸ್‍ನಲ್ಲಿ ವಿಡಿಯೋ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಶ್ ಅವರಿಗೆ ಪತ್ನಿ, ಒಬ್ಬ ಪುತ್ರಿ ಇದ್ದಾರೆ.
ಎಡಿಟಿಂಗ್ ವಿಭಾಗದಲ್ಲಿ ನೂತನ ಕ್ರಾಂತಿ ಎನಿಸಿದ ಎವಿಡ್ ಸಾಪ್ಟವೆರ್ ಮೊದಲ ಹಂತದ ಉದ್ಯೋಗಿಗಳ ಸಾಲಿಗೆ ಸೇರಿದ ಕೀರ್ತಿ ಇವರದ್ದಾಗಿತ್ತು. ಉದಯ ವಾರ್ತೆ ವಾಹಿನಿ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ದಿವಂಗರು ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿ ಉತ್ತಮ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದ್ದರು. ಮೃತ ಮಹೇಶ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಗೆಳೆಯರ ಬಳಗ ಪ್ರಾರ್ಥಿಸಿದ್ದು, ಮಹೇಶ್ ಅಗಲಿಕೆ ನೋವು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ.
====================

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ