ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನಲೆ: ನಾಮಪತ್ರ ಸಲ್ಲಿಸಿದ ಕೆ.ಚಂದ್ರಶೇಖರ ರಾವ್

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಇಂದು ಗಜ್ವೆಲ್ ವಿಧಾನಸಭಾ ಕ್ಷೇತ್ರದಿಂದ ಕೆ.ಚಂದ್ರಶೇಖರ ರಾವ್ ನಾಮಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿ ಸ್ಮಿತಾ ಸಬರ್ವಾಲ್ ಅವರಿಗೆ ಕೆಸಿಆರ್ ನಾಮಪತ್ರದೊಂದಿಗೆ ತಮ್ಮ ಆಸ್ತಿ ಘೋಷಣೆ ಕುರಿತ ಪ್ರಮಾಣಪತ್ರವನ್ನೂ ಸಲ್ಲಿಕೆ ಮಾಡಿದರು. ಈ ವೇಳೆ ಕೆಸಿಆರ್ ತಮ್ಮ ಬಳಿ ಒಟ್ಟು 22.61 ಕೋಟಿ ರೂ ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದಾರೆ.

ತಮ್ಮ ಬಳಿ ಸುಮಾರು 16 ಎಕರೆ ಕೃಷಿ ಭೂಮಿ ಇದ್ದು, ಸ್ವಂತ ಮನೆ ಇದೆ. ಆದರೆ ಯಾವುದೇ ಸ್ವಂತ ಕಾರು ಇಲ್ಲ ಎಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷಕ್ಕಿಂತೆ ಕೆಸಿಆರ್ ಆಸ್ತಿ ಮೌಲ್ಯದಲ್ಲಿ ಸುಮಾರು 5.5 ಕೋಟಿ ರೂಗಳ ಆಸ್ತಿ ಮೌಲ್ಯ ಹೆಚ್ಚಾಗಿದ್ದು, ಅವರ ಬಳಿ ಒಟ್ಟು 22.61 ಕೋಟಿ ರೂ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳಿವೆಯಂತೆ. 2014ರಲ್ಲಿ ಅವರು 15.95 ಕೋಟಿ ರೂಗಳ ಆಸ್ತಿ ಘೋಷಣೆ ಮಾಡಿದ್ದರು.

ಇಷ್ಟೆಲ್ಲಾ ಆಸ್ತಿಗಳಿದ್ದರೂ ತೆಲಂಗಾಣ ಸಿಎಂ ಬಳಿ ಸ್ವಂತಕ್ಕೊಂದು ಕಾರು ಇಲ್ಲ ಎಂಬುದು ಅಚ್ಚರಿ ವಿಷಯವಾಗಿದೆ. ಇನ್ನೊಂದು ವಿಶೇಷವೆಂದರೆ ಅವರ ಪಕ್ಷದ ಚಿನ್ಹೆ ಕೂಡ ಕಾರೇ ಆಗಿದೆ.

Telangana Assembly Election, KCR Nomination file,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ