ಸಹಕಾರ ರತ್ನ ಪ್ರಶಸ್ತಿಗೆ ಬಿ.ಎನ್.ವೆಂಕಟಾಚಲಯ್ಯ ಆಯ್ಕೆ

ಬೆಂಗಳೂರು, ನ.15- 2018ನೆ ಸಾಲಿನ ಸಹಕಾರ ರತ್ನ ಪ್ರಶಸ್ತಿಗೆ ನಗರದಿಂದ ಬಿ.ಎನ್.ವೆಂಕಟಾಚಲಯ್ಯ ಅವರು ಆಯ್ಕೆಯಾಗಿದ್ದಾರೆ.
ಬೆಂಗಳೂರು ವಿಭಾಗದಲ್ಲಿ ತುಮಕೂರಿನ ಅನ್ನಪೂರ್ಣಮ್ಮ ವೆಂಕಟನಂಜಪ್ಪ, ಕೋಲಾರದ ಕೆ.ಶ್ರೀನಿವಾಸಗೌಡ ಆಯ್ಕೆಯಾಗಿದ್ದಾರೆ.
ಮೈಸೂರು ವಿಭಾಗದಿಂದ ಉಡುಪಿಯ ಸರಳಾ ಬಿ.ಕಾಂಚನ್ ಹಾಗೂ ಕೆ.ಕೃಷ್ಣರಾಜ ಸರಳಾಯ, ಹಾಸನದಿಂದ ಡಾ.ಎ.ಸಿ.ಮುನಿವೆಂಕಟೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಳಗಾವಿ ವಿಭಾಗದಲ್ಲಿ ಉತ್ತರ ಕನ್ನಡದ ಜಿ.ಟಿ.ಹೆಗಡೆ ತಟ್ಟಿಸರ, ಸಿರ್ಸಿ , ಕಲಬುರಗಿ ವಿಭಾಗದಲ್ಲಿ ಬೀದರ್‍ನ ಎಂ.ಎಸ್.ಅಲಿ, ದಿ.ಗುರುಪಾದಪ್ಪ ನಾಗಮಾರಪಲ್ಲಿ (ಮರಣೋತ್ತರ) ಅವರನ್ನು ಆಯ್ಕೆ ಮಾಡಲಾಗಿದೆ.
ನಿವೃತ್ತಿ ಇಲಾಖಾಧಿಕಾಧಿರಿಗಳಲ್ಲಿ ಬೆಳಗಾವಿಯ ಎಸ್.ಎಂ.ಕಲೂತಿ ಅವರನ್ನು ಆಯ್ಕೆಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ