ಕಲ್ಲುಹೊಡೆದು ಟಿಆರ್ ಎಸ್ ನಾಯಕನನ್ನು ಹತ್ಯೆಗೈದ ದುಷ್ಕರ್ಮಿಗಳು

ಹೈದರಾಬಾದ್: ವೈಕ್ತಿಕ ದ್ವೇಷದ ಹಿನ್ನಲೆಯಲ್ಲಿ ತೆಲಂಗಾಣ ರಾಷ್ಟ ಸಮಿತಿ (ಟಿಆರ್ ಎಸ್) ನಾಯಕರೊಬ್ಬರನ್ನು ದುಷ್ಕರ್ಮಿಗಳು ಕಲ್ಲುಹೊಡೆದು ಸಾಯಿಸಿರುವ ಘಟನೆ ತೆಲಂಗಾಣದ ವಿಕಾರಾಬಾದ್ ನಲ್ಲಿ ನಡೆದಿದೆ.

ನಾರಾಯಣ ರೆಡ್ಡಿ ಮೃತ ಟಿ ಆರ್ ಎಸ್ ನಾಯಕ. ವಿಕಾರಾಬಾದ್ ಜಿಲ್ಲೆಯ ಸುಲ್ತಾನ್ ಪುರ್ ಗ್ರಾಮದಲ್ಲಿ ಬೆಳಿಗ್ಗೆ ಸುಮಾರು 6.15ಕ್ಕೆ ಈ ಘಟನೆ ನಡೆದಿದೆ. ನಾರಾಯಣ ರೆಡ್ಡಿ ಹತ್ಯೆ ತನಿಖೆ ಕೈಗೊಂಡಿರುವ ಪೋಲೀಸರು ಈ ಹತ್ಯೆ ಹಿಂದೆ ರಾಜಕೀಯದ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಕಾರಾಬಾದ್ ನ ಪ್ರಭಾವಿ ಮುಖಂಡರಾಗಿದ್ದ ನಾರಾಯಣ ರೆಡ್ಡಿ ಗ್ರಾಮದ ಇನ್ನೊಂದು ಗುಂಪಿನ ಜನಗಳೊಡನೆ ವೈರತ್ವ ಹೊಂದಿದ್ದರು. ಅಲ್ಲದೆ ಆ ಗುಂಪಿನ ಮೇಲೆ ಹಿಂದೊಮ್ಮೆ ಹಲ್ಲೆ ನಡೆಸಿದ್ದರೆಂದು ಹೇಳಲಾಗಿದೆ.

ಈ ನಡುವೆನಾರಾಯಣ ರೆಡ್ಡಿ ಬೆಂಬಲಿಗರು ಇವರ ಸಾವಿನ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಘಟನೆ ಬಳಿಕ ನಾರಾಯಣ ರೆಡ್ಡಿ ಬೆಂಬಲಿಗರು ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾರಣಂತಿಕವಾಗಿ ಹಲ್ಲೆ ನಡೆಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Telangana, TRS leader Narayana Reddy, stoned to death

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ