ಸಿಂಗಪೂರ್‍ನಲ್ಲಿ ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ

ಬೆಂಗಳೂರು, ನ.5-ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ (ಸಮುದಾಯ ಸಮ್ಮಿಲನ ನಮ್ಮ ದೊರೆಗೆ ನಮನ) ಹಾಗೂ ಕನ್ನಡೋತ್ಸವ 2019ನ್ನು ಸಿಂಗಪೂರ್‍ನಲ್ಲಿ 2019ರ ಫೆಬ್ರವರಿ 23 ರಂದು ಆಯೋಜಿಸಲಾಗಿದೆ.

ವಿಶ್ವ ಒಕ್ಕಲಿಗರ ಮಹಾವೇದಿಕೆಯ ದಶಮಾನೋತ್ಸವದ ಸಂಭ್ರಮದಲ್ಲಿ ಸಿಂಗಪೂರ್‍ನಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಧರ್ಮ ಪ್ರಭುಗಳ ವಿಚಾರಗಳ ಲೋಕಾರ್ಪಣೆ, ನಾಡಿನ ಸಂತ ಶ್ರೇಷ್ಟರ ಮಾರ್ಗದರ್ಶನ, ಪ್ರತಿಷ್ಠಿತರ ಸಮಾಗಮ, ಗೀತ ನಮನ, ಅಕ್ಷರ ನಮನ, ರಂಗ ನಮನ, ದೃಶ್ಯ ನಮನ, ವಿಚಾರ ಮಂಥನ, ಛಾಯಾಚಿತ್ರ ಪ್ರದರ್ಶನ, ಸಾಧಕರಿಗೆ ಅಂತಾರಾಷ್ಟ್ರೀಯ ಸಮ್ಮಾನ, ವಿಶ್ವ ಕನ್ನಡಿಗರ ಸಮ್ಮಿಲನದಂತಹ ವಿವಿಧ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನೆರವೇರಲಿದೆ ಎಂದು ವೇದಿಕೆ ಅಧ್ಯಕ್ಷ ವೈ.ಡಿ.ರವಿಶಂಕರ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ