ಯೋಧರ ಬಗೆಗಿನ ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆ

ಬೆಂಗಳೂರು,ನ.4- ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿ ಪ್ರತಿಷ್ಠಾನ ವತಿಯಿಂದ ಯೋಧರ ಬಗೆಗಿನ ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಜನವರಿ ತಿಂಗಳಿನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ವತ್ಸಲ ಸುರೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಧ್ವನಿ ಸುರುಳಿಯಲ್ಲಿ ದೇಶಭಕ್ತಿ, ತಾಯಿ ಹಾಗೂ ಯೋಧ ಮಗನ ಬಾಂಧವ್ಯ , ಸೈನಿಕ ಪತಿಯನ್ನು ಯುದ್ದಕ್ಕೆ ಕಳುಹಿಸಿ ವಿರಹ ವೇದನೆ ಅನುಭವಿವ ಪತ್ನಿಯ ಅಳಲು ಸೇರಿದಂತೆ ಯೋಧರ ಜೀವನದ ಹಲವು ಕೋನಗಳನ್ನು ಒಳಗೊಂಡ ಹಾಡುಗಳಿರುತ್ತವೆ ಎಂದು ತಿಳಿಸಿದರು.

ಲತಾ ಹಂಸಲೇಖ ಎಂ.ಡಿ.ಪಲ್ಲವಿ, ಮಂಗಳ ರವಿ, ಶ್ರೀರಕ್ಷಾ ಅರವಿಂದ ಶ್ವೇತ ಸೇರಿದಂತೆ ಹಲವಾರು ದಿಗ್ಗರು ಈ ಗೀತೆಗಳನ್ನು ಹಾಡಲಿದ್ದಾರೆ ಎಂದರು.
ಮೂಡಲ್ ಕುಣಿಗಲ್ ಕೆರೆ ಖ್ಯಾತಿಯ ರಾಮ್ ಪ್ರಸಾದ್ ಅವರ ರಾಗ ಸಂಯೋಜನೆಯಲ್ಲಿ ಸಂಗೀತ ನಿರ್ದೇಶಕ ಪ್ರವೀಣ್ ಡಿ.ರಾವ್ ವಾದ್ಯ ಸಂಯೋಜನೆಯಲ್ಲಿ ಈ ಗೀತೆಗಳು ಅಮೋಘವಾಗಿ ಮೂಡಿಬರಲಿವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಚಿತ್ರನಟ ರಮೇಶ್, ಚಕ್ರವರ್ತಿ ಸೂಲಿಬೆಲೆ, ದಲಿತ ಕವಿ ಸಿದ್ದಲಿಂಗಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ