ಶಬರಿಮಲೆ ದೇವಾಲಯಕ್ಕೆ ತೆರಳಿದ್ದ ಇಬ್ಬರು ಪತ್ರಕರ್ತೆಯರನ್ನು ತಡೆದ ಪ್ರತಿಭಟನಾಕಾರರು

ತಿರುವನಂತಪುರಂ: ಶಬರಿಮಲೆ ಐಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತರಳಿದ್ದ ಇಬ್ಬರು ಪತ್ರಕರ್ತೆಯರನ್ನು ತಡೆದು ವಾಪಸ್ಸು ಕಳುಹಿಸಿದ ಘಟನೆ ನಡೆದಿದೆ.

ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯ ಇಬ್ಬರು ಪತ್ರಕರ್ತೆಯರನ್ನು ಪ್ರತಿಭಟನಾಕಾರರು ಗುರುವಾರ ಮುಂಜಾನೆ ವಾ‍ಪಾಸು ಕಳುಹಿದ್ದಾರೆ. ದೆಹಲಿ ಮೂಲದ ಸುಹಾಸಿನಿ ರಾಜ್‌ ಮತ್ತು ಅವರ ವಿದೇಶಿ ಮೂಲದ ಸಹದ್ಯೋಗಿ ಅವರನ್ನು ಪ್ರತಿಭಟನಾಕಾರರು ಪಂಪಾದಿಂದ ವಾಪಾಸು ಕಳುಹಿಸಿದ್ದಾರೆ. ಅಯ್ಯಪ್ಪಸ್ವಾಮಿ ದೇಗುಲಕ್ಕೆ ಹೋಗುವ ದಾರಿಗೆ ಅಡ್ಡ ಕುಳಿತ ಪ್ರತಿಭಟನಾಕಾರರು ಪತ್ರಕರ್ತೆಯರನ್ನು ತಡೆದಿದ್ದಾರೆ. ಇದೇ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.

ಅಯ್ಯ‍ಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ