ಮಂಡ್ಯ ಲೋಕಸಭೆ ಉಪ ಚುನಾವಣೆ: ಜೆಡಿಎಸ್​ ಅಭ್ಯರ್ಥಿಯಾಗಿ ಎಲ್​.ಆರ್​ ಶಿವರಾಮೇಗೌಡ ಕಣಕ್ಕೆ

ಬೆಂಗಳೂರು: ಮಂಡ್ಯ ಲೋಕಸಭೆ ಉಪ ಚುನಾವಣೆಗೆ ಮಾಜಿ ಶಾಸಕ ಎಲ್​.ಆರ್​ ಶಿವರಾಮೇಗೌಡ ಅವರನ್ನು ಜೆಡಿಎಸ್​ನ ಅಭ್ಯರ್ಥಿಯಾಗಿ ಘೋಷಣೆಮಾಡಲಾಗಿದೆ.

ಈ ಮೊದಲು ಮಂಡ್ಯದಿಂದ ಐಆರ್​ಎಸ್​ ಅಧಿಕಾರಿಲಕ್ಷ್ಮೀ ಅಶ್ವಿನ್​ ಗೌಡ ಅವರ ಹೆಸರು ಜೆಡಿಎಸ್ ನಿಂದ ಬಲವಾಗಿ ಕೇಳಿಬಂದಿತ್ತು. ಆದರೆ ಅಂತಿಮವಾಗಿ ಶಿವರಾಮೇಗೌಡರಿಗೆ ಜೆಡಿಎಸ್ ಟಿಕೆಟ್​ ನೀಡಿದೆ.

ಶಿವರಾಮೇಗೌಡರು ಮಂಡ್ಯ ರಾಜಕಾರಣದಲ್ಲಿ ಪಳಗಿದವರಾಗಿದ್ದು, ಮಾಜಿ ಸಚಿವ ಚೆಲುವರಾಯಸ್ವಾಮಿ ವಿರುದ್ಧವೇ ರಾಜಕಾರಣ ಮಾಡಿಕೊಂಡು ಬಂದು ಜಿಲ್ಲೆಯಲ್ಲಿ ತಮ್ಮದೇ ಪ್ರಭಾವ ವಲಯ ಹೊಂದಿದ್ದಾರೆ. ಜೆಡಿಎಸ್​ನ ಭದ್ರ ನೆಲೆಯಾಗಿರುವ ಮಂಡ್ಯವನ್ನು ಉಳಿಸಿಕೊಂಡು ಹೊಗಬೇಕಿದ್ದರೆ, ಶಿವರಾಮೇಗೌಡರಂಥ ಆಕ್ರಮಣಕಾರಿ ಪ್ರವೃತ್ತಿಯ ವ್ಯಕ್ತಿತ್ವದ ಅಭ್ಯರ್ಥಿ ಸ್ಪರ್ಧಿಸುವುದು ಅಗತ್ಯ ಎಂಬ ಕಾರಣಕ್ಕೆ ಜೆಡಿಎಸ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ