ಚಡಚಣ ಸಹೋದರರ ಎನಕೌಂಟರ್ ಹಾಗೂ ಕೊಲೆ ಆರೋಪ ಪ್ರಕರಣ ಮತ್ತೊಂದು ಟ್ವಿಸ್ಟ್

ವಿಜಯಪುರ: ಭೀಮಾ ತೀರದ ಚಡಚಣ ಸಹೋದರರ ಎನಕೌಂಟರ್ ಹಾಗೂ ಕೊಲೆ ಆರೋಪ ಪ್ರಕರಣಕ್ಕೆ ಮತ್ತೋಂದು ಟ್ವಿಸ್ಟ್ ಸಿಕ್ಕಿದೆ.

ಕಳೆದ ವರ್ಷ ಅಕ್ಟೋಬರ್ 30 ರಂದು ಘಟನೆ ನಡೆದಾಗ ಚಡಚಣ ಸಹೋದರರ ಜೊತೆಗಿದ್ದ ಆರು ಜನರ ವಿರುದ್ಧ ಅಂದಿನ ಚಡಚಣ ಸಿಪಿಐ ಎಂ. ಬಿ. ಅಸೋದೆ ದಾಖಲಿಸಿದ್ದ ದರೋಡೆ ಕೇಸ್ ಸುಳ್ಳು ಎಂದು ವಿಜಯಪುರ ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂದಿದೆ.

ಇಂಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ ವಿಜಯಪುರ ಪೊಲೀಸರು ಅಕ್ಟೋಬರ್ 30ರ ಘಟನೆಯ ಸಾಕ್ಷಿಗಳು ಬಾಯಿ ಮುಚ್ಚಿಸಲು ಅಂದಿನ ಚಡಚಣ ಸಿಪಿಐ ಎಂ. ಬಿ. ಅಸೋದೆ ಸುಳ್ಳು ಕೇಸ್ ದಾಖಲಿಸಿರುವ ಶಂಕೆಯಿದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ