ವಿಶ್ವ ವೀರಶೈವ(ಲಿಂಗಾಯಿತ) ಮತ್ತು ಜಂಗಮ ವಧು-ವರರ ಮಹಾಮೇಳ

ಬೆಂಗಳೂರು, ಅ.6-ವೀರಶೈವ ಕಲ್ಯಾಣ ಕೇಂದ್ರ ಟ್ರಸ್ಟ್ ವತಿಯಿಂದ ಚಂದ್ರಶೇಖರ ನಾಗರಾಳ ಮಠ ಸಂಘಟಿತ 18ನೇ ವಿಶ್ವ ವೀರಶೈವ(ಲಿಂಗಾಯಿತ) ಮತ್ತು ಜಂಗಮ ವಧು-ವರರ ಮಹಾಮೇಳವನ್ನು ಅ.28ರಂದು ಆನಂದರಾವ್ ವೃತ್ತದಲ್ಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಮಹಾಮೇಳದಲ್ಲಿ ಸಮಾಜದ ಸುಸಂಸ್ಕøತ , ಸುಶಿಕ್ಷಿತ ವಧು-ವರರು ಪಾಲಕರು, ಪೆÇೀಷಕರು 28ರಂದು ಬೆಳಗ್ಗೆ 10 ಗಂಟೆಯೊಳಗೆ ಆಗಮಿಸಿ ಕಾಯ್ದಿರಿಸಿಕೊಳ್ಳಬೇಕೆಂದು ಸಂಸ್ಥೆಯ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಂಗಮ ಅಪೇಕ್ಷಿತರಿಗೆ ಪ್ರತ್ಯೇಕ ಜಂಗಮ ಜ್ಯೋತಿ ವಿಭಾಗ ಪರಿಚಯ ಹಾಗೂ ವಿಕಲಚೇತನ ಪರಿತ್ಯಕ್ತರಿಗೂ, ವಿಧುರ-ವಿಧವಾ ವಿವಾಹ, ಅಪೇಕ್ಷಿತರಿಗೂ ಪ್ರತ್ಯೇಕ ಮುಸ್ಸಂಜೆ ಮುಖಾಮುಖಿ ಇದೆ.

ಸಮಾವೇಶದಲ್ಲಿ ಪಾಲ್ಗೊಳ್ಳುವ ವಧುವರರು ಭಾವಚಿತ್ರಗಳೊಂದಿಗೆ ಎ4 ಅಳತೆಯ ವೈವಾಹಿಕ ಸ್ವವಿವರಗಳನ್ನು ತರಬೇಕು. ಪ್ರವೇಶ ಪತ್ರಗಳನ್ನು ಈಗಿನಿಂದಲೇ ಪಡೆಯಬಹುದಾಗಿದೆ. ದೂರದೂರುಗಳಿಂದ ಬರುವವರು ಪ್ರವೇಶ ಪತ್ರಗಳನ್ನು ಸಮಾವೇಶದ ಹಿಂದಿನ ದಿನ ಸಂಜೆ 6 ಗಂಟೆ ಮತ್ತು ಬೆಳಗ್ಗೆ 8 ಗಂಟೆಯಿಂದಲೇ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಮೊ: 9590121008, 9886438464, 9620276099 ಇಮೇಲ್‍ಛಿಡಿಟಿಚಿgಚಿಡಿಚಿಟmಚಿಟಣh@gmಚಿiಟ.ಛಿom ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ