ಚಿತ್ರಕಲಾ ಪರಿಷತ್ ನಲ್ಲಿ ಇಂದಿನ ವ್ಯವಸ್ಥೆ-ಅವಸ್ಥೆ ಒಂದು ಅವಲೋಕನ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು,ಅ.6- ಬಯಲುಪರಿಷತ್ -ಭಾರತ ಯಾತ್ರ ಕೇಂದ್ರದ ವತಿಯಿಂದ ಗಾಂಧಿ-150 ಮತ್ತು ಜೆಪಿ ಜನ್ಮದಿನಾಚರಣೆ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಅ.11ರಂದು ಬೆಳಗ್ಗೆ 11ಕ್ಕೆ ಇಂದಿನ ವ್ಯವಸ್ಥೆ-ಅವಸ್ಥೆ ಒಂದು ಅವಲೋಕನ, ಛಾಯಾಚಿತ್ರ ಪ್ರದರ್ಶನ ಹಾಗೂ ಜೆ.ಪಿ. ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಜೆಪಿ ಪ್ರಶಸ್ತಿ ಪುರಸ್ಕøತ ಎಚ್.ಎಸ್.ದೊರೆಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಭಾರತಯಾತ್ರಾ ಕೇಂದ್ರ ಡಾ.ಬಿ.ಎಲ್.ಶಂಕರ್ , ಬಯಲು ಪರಿಷತ್‍ನ ವೈ.ಎಸ್.ವಿ.ದತ್ತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಛಾಯಾಚಿತ್ರ ಪ್ರದರ್ಶನದಲ್ಲಿ ಶ್ರೀ ತಮರಿ ಶ್ರೀಧರ್ ತೆಗೆದಿರುವ ಭಾರತದ ಮಾಜಿ ಪ್ರಧಾನಿ ದಿ.ಚಂದ್ರಶೇಖರ್ ಅವರ ಭಾರತ ಯಾತ್ರದ ವಿಶೇಷ ಅಪರೂಪದ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಇದೇ ವೇಳೆ ಚಿಂತಕ ವೈಎಸ್‍ವಿ ದತ್ತ ವಿರಚಿತ ಕೃತಿ ವರ್ತಮಾನ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಪತ್ರಕರ್ತ ಸುಗತ ಶ್ರೀನಿವಾರಾಜು ಕೃತಿ ಲೋಕರ್ಪಾಣೆ ಮಾಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ