ಲಾಂಗ್, ಮಚ್ಚು ಹಿಡಿದು ನಡುರಸ್ತೆಯಲ್ಲಿ ದಾಂಧಲೆ ಮಾಡಿ ಪರಾರಿ

ಬೆಂಗಳೂರು, ಅ.5- ಲಾಂಗ್, ಮಚ್ಚು ಹಿಡಿದು ನಡುರಸ್ತೆಯಲ್ಲಿ ದಾಂಧಲೆ ಮಾಡಿ ಪರಾರಿಯಾಗಿದ್ದ ಎಂಟು ಮಂದಿ ರೌಡಿಗಳನ್ನು ವಯ್ಯಾಲಿಕಾವಲ್ ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನಿನ್ನೆ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ವಯ್ಯಾಲಿಕಾವಲ್ ಕೋದಂಡರಾಮಪುರದ 12ನೆ ಕ್ರಾಸ್‍ನಲ್ಲಿ ಈ ರೌಡಿಗಳು ಲಾಂಗ್, ಮಚ್ಚು ಹಿಡಿದು ರಸ್ತೆಯಲ್ಲಿ ಸಾರ್ವಜನಿಕರನ್ನು ಬೆದರಿಸಿದ್ದರು.
ಒಂದು ಅಂಗಡಿ, ಒಂದು ಬೇಕರಿಯ ಗ್ಲಾಸ್ ಒಡೆದು ದಾಂಧಲೆ ಮಾಡಿ ಪರಾರಿಯಾಗಿದ್ದರು. ಸುದ್ದಿ ತಿಳಿದ ವಯ್ಯಾಲಿಕಾವಲ್ ಠಾಣೆ ಪೆÇಲೀಸರು ಕಾರ್ಯಾಚರಣೆ ನಡೆಸಿ ಎಂಟು ಮಂದಿ ರೌಡಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ