ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ 3-4 ವರ್ಷದ ಮಕ್ಕಳು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲ್ಲೂಕಿನಲ್ಲಿ ಎಸ್ ಎಫ್ ಹೊಸಗೌಡ್ರ ವಲ್ಡ್೯ ಸ್ಕೂಲ್ ಬದಾಮಿಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು.

ಇದರಲ್ಲಿ ಪ್ರಮುಖವಾಗಿ ವಿಶೇಷತೆ ಕಂಡು ಬಂದಿದ್ದು, ಮೂರು ರಿಂದ ನಾಲ್ಕು ವರ್ಷದ ಮುದ್ದು ಕಂದಮ್ಮಗಳು ತಮ್ಮ ಸ್ವ ಇಚ್ಛೆಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು ಈಗಿನ ಪೀಳಿಗೆಯಲ್ಲಿ ಮಾದರಿ ಅಂತಾನೇ ಹೇಳಬಹುದು.

ಈ ಸ್ವಚ್ಛತಾ ಕಾರ್ಯದಲ್ಲಿ ಹೆಚ್ಚು ಪಾಲ್ಗೊಳ್ಳ ಬೇಕಾಗಿರುವುದು ಯುವಕರು.ಯುವಕರಿಗಿಂತ ನಾವೇನು ಚಿಕ್ಕವರು ಕಡಿಮೆಯಿಲ್ಲ ಎಂಬ ಕೀರ್ತಿ ತೋರಿಸಿದ ಮುದ್ದು ಕಂದಮ್ಮಗಳು .

ಕೆಲವೊಂದು ಯುವಕರಿಗೆ ಮಾತ್ರ ಮಾಡಬೇಕೆನ್ನುವ ಮನೋಭಾವನೆ ಇರುತ್ತದೆ.ಆದರೆ ಕೆಲವೊಂದು ಯುವಕರಿಗೆ ಮಾಡಬೇಕೆನ್ನುವ ಮನೋಭಾವನೆ ಇಲ್ಲದ ಕಾರಣ ಈ ಚಿಕ್ಕ ಕಂದಮ್ಮಗಳನ್ನು ನೋಡಿ ಕಲಿಯಲಿ ಎಂಬುದೇ ನಮ್ಮ ಆಶಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ