ಬೌದ್ದ ಧರ್ಮಗುರು ದಲೈಲಾಮಾ ಹತ್ಯೆಗೆ ಸ್ಕೆಚ್​​: ಬೆಂಗಳೂರಿನಲ್ಲಿಯೇ ಸಂಚು ರೂಪಿಸಿದ್ದ ಉಗ್ರರು..!

ಬೆಂಗಳೂರುಜಗತ್ತಿನ ಮಹಾನ್​​​ ನಾಯಕ, ಬೌದ್ಧ ಧರ್ಮದ ಗುರು ದಲೈಲಾಮಾ ಹತ್ಯೆಗೆ ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಜೆಎಂಬಿ ಎಂಬ ಸಂಘಟನೆಯ ಉಗ್ರರು ಬೆಂಗಳೂರಿನಲ್ಲಿಯೇ ಸ್ಕೆಚ್​​ ಹಾಕಿದ್ದರು ಎಂಬ ಭಯಾನಕ ಮಾಹಿತಿ ಭೋದ್ ಗಯಾ ಸ್ಫೋಟದ ಆರೋಪಿಗಳಿಂದ ಹೊರ ಬಿದ್ದಿದೆ.
ಭೋಧಗಯಾ ಸ್ಪೋಟದ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯೋರ್ವನನ್ನು ರಾಮನಗರದಲ್ಲಿ ಬಂಧಿಸಲಾಗಿತ್ತು. ಜಹಿದ್ದೀಲ್ ಇಸ್ಲಾಂ ಅಲಿಯಾಸ್ ಮುನೀರ್ ಎಂಬಾತ ಪ್ರಮುಖ ಆರೋಪಿ. ಪೊಲೀಸರ ವಿಚಾರಣೆ ವೇಳೆ ಜಗತ್​​ ಗುರು ದಲೈಲಾಮಾರನ್ನು ಬಾಂಬ್ ಸ್ಪೋಟಿಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದೆವು ಎಂದು ಬಾಯಿಬಿಟ್ಟಿದ್ದಾರೆ.
ನಾವು 2018 ರ ಆರಂಭದಲ್ಲಿಯೇ ಬಾಂಬ್​​ ಸ್ಪೋಟಕ್ಕೆ ಸಂಚು ರೂಪಿಸಿದ್ದೆವು. ಬೌದ್ಧ ಧರ್ಮಗುರು ದಲೈಲಾಮ ಅವರು ರೋಹಿಂಗ್ಯಾ ಮುಸ್ಮಿಮರನ್ನು ವಿರೋಧಿಸುತ್ತಿದ್ದರು. ಹಾಗಾಗಿ ದಲೈಲಾಮ ಅವರನ್ನು ಹತ್ಯೆಗೆ ಸ್ಕೆಚ್​​ ಹಾಕಿದ್ದೆವು ಎಂದು ಬಂಧಿತ ಮುನೀರ್ ಜಮಾತ್ ಮುಜಾಹೀದ್ದೀನ್ ತಿಳಿಸಿದ್ದಾರೆ.
ಮುನೀರ್ ಜಮಾತ್ ಮುಜಾಹೀದ್ದೀನ್ ಮೂಲತ ಬಾಂಗ್ಲಾದೇಶದ ಉಗ್ರ ಸಂಘಟನೆಯೊಂದರಲ್ಲಿ ತೊಡಗಿಸಿಕೊಂಡಿದ್ಧ. ಬಂಧನಕ್ಕೂ ಮುನ್ನ ನಾಲ್ಕು ವರ್ಷಗಳಕಾಲ ಬೆಂಗಳೂರಿನಲ್ಲಿಯೇ ನೆಲೆಸಿದ್ದ. ಈ ಸಂದರ್ಭದಲ್ಲಿಯೇ ದಲೈಲಾಮಾ ಅವರನ್ನು ಮುಗಿಸಲು ಸ್ಕೆಚ್ ರೆಡಿ ಮಾಡಿದ್ದರು. ಈ ವಿಚಾರ ಬೋದ್ ಗಯಾ ಪ್ರಕರಣ ಸಂಬಂಧಿತ ವಿಚಾರಣೆ ವೇಳೆ ಪೊಲೀಸರಿಗೆ ಸಿಕ್ಕಿದೆ.
ಈಗಾಗಲೇ ಬಾಂಬ್​​ ಸ್ಫೋಟದ ಬಗ್ಗೆ ಎನ್​ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಕುರಿತು ಕರ್ನಾಟಕ ಪೊಲೀಸರಿಗೂ ಎನ್​ಐಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಮನಗರದಲ್ಲಿ ಬಂಧಿತರಾಗಿದ್ದ ಉಗ್ರರ ಮುನೀರ್ ಶೇಖ್ ವಿಚಾರಣೆಯಲ್ಲಿ ದಲೈಲಾಮಾ ಹತ್ಯೆಗೆ ಸ್ಕೆಚ್​​ ಹಾಕಿದ್ದ ಸ್ಪೋಟಕ ಮಾಹಿತಿ ಸಿಕ್ಕಿದೆ ಎಂದು ಚಾರ್ಜ್​​ಶೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ