ರೌಡಿ ಶೀಟರ್ ಬರ್ಬರ ಹತ್ಯೆ

ಹಾಸನ: ರೌಡಿ ಶೀಟರ್ ಒಬ್ಬನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆ ಮಂದಿ ಎದುರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬಂಬೂ ಬಜಾರ್ ಬಳಿ ಮಧ್ಯೆರಾತ್ರಿ ನಡೆದಿದೆ.

ಕಿರಣ್ ಅಲಿಯಾಸ್ ಗುಂಡ ಕೊಲೆಯಾದ ರೌಡಿ ಶೀಟರ್. ಬಂಬೂ ಬಜಾರ್ ನಿವಾಸಿಗಳಾದ ಸೀನ, ನಾಗ, ಮಂಜ, ತಿಮ್ಮಣ್ಣ ಮತ್ತು ಸುಶೀಲೇಗೌಡ ಎಂಬುವರಿಂದ ಈ ಕೃತ್ಯ ನಡೆದಿದ್ದು,ತಡರಾತ್ರಿ ಕಾರಿನಲ್ಲಿ ಬಂದು ಮನೆಗೆ ನುಗ್ಗಿ ಏಕಾಏಕಿ ಮನೆ ಮಂದಿ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ನಂತರ ಕಿರಣ್ ಗೆ ಇಟ್ಟಿಗೆಯಿಂದ ತಲೆ ಭಾಗಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ನೆನ್ನೆ ಮಧ್ಯಾಹ್ನ ಕಿರಣ್ ಮತ್ತು ಈ ಗುಂಪಿನ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಅಲ್ಲದೆ ಮೃತ ಕಿರಣ್ ಕುಡಿದ ಅಮಲಿನಲ್ಲಿ ಅಕ್ಕ,ಪಕ್ಕದ ನಿವಾಸಿಗಳ ಜೊತೆ ಜಗಳ ಕಾಯುತ್ತಿದ್ದನು.ಈ ಘಟನೆಯನ್ನು ಮನೆಮಂದಿ ಹಾಗೂ ಅಕ್ಕಪಕ್ಕದವರು ನೋಡಿ ಬೆಚ್ಚಿ ಬಿದ್ದಿದ್ದಾರೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ