ಭಾರತ ಗೆಲುವಿಗೆ ವಿಶೇಷ ಪೂಜೆ

ಹುಬ್ಬಳ್ಳಿ: ದುಬೈನಲ್ಲಿ ನಡೆಯಿತ್ತಿರುವ ಎಷ್ಯಾಕಪ್ ನಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡ ಸೆನಸಾಡಲಿದ್ದು, ಸಂಪ್ರದಾಯಿಕ ಎದುರಾಳಿ ಶತ್ರುರಾಷ್ಟ್ರದ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಭಾರತ ಜಯಗಳಿಸಲಿ ಎಂದು ಹುಬ್ಬಳ್ಳಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು‌. ಕನ್ನಡಪರ ಸಂಘಟನೆ ಹಾಗೂ ಕ್ರಿಕೆಟ್ ಅಭಿಮಾನಿಗಳು ನಗರದ ಕೋರ್ಟ ವೃತ್ತದ ಬಳಿಬಿರುವ ಸಾಯಿ ಬಾಬಾ ಮಂದಿರದಲ್ಲಿ ಭಾರತದ ಗೆಲುವುಗಾಗಿ ವಿಷೇಶ ಪೂಜೆ ಸಲ್ಲಿಸಿದರು. ಸಾಯಿಬಾಬಾ ಮೂರ್ತಿ ಎದುರು ಬ್ಯಾಟ್ ಹಾಗೂ ಬಾಲ್ ಇಡುವ ಮೂಲಕ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ ಕರುಣಿಸುಂತೆ ಪ್ರಾರ್ಥನೆ ಮಾಡಿದರು. ಭಾರತದ ಕ್ರಿಕೆಟ್ ತಂಡದ ಪರ ಜಯಘೋಷ ಹಾಕಿದ ಅಭಿಮಾನಿಗಳು ಭಾರತ ತಂಡಕ್ಕೆ ಶುಭಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ