ಬೈಕ್‍ ಮತ್ತು ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ತಾಯಿ-ಮಗಳು ಸ್ಥಳದಲ್ಲೇ ಸಾವು

ಬೆಂಗಳೂರು, ಸೆ.14- ಗಣೇಶ ಹಬ್ಬದ ಅಂಗವಾಗಿ ಸ್ನೇಹಿತನ ಮನೆಗೆ ಹೋಗಿ ಬೈಕ್‍ನಲ್ಲಿ ಹಿಂದಿರುಗುತ್ತಿದ್ದ ದಂಪತಿ ಹಾಗೂ ಮಗುವಿಗೆ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ತಾಯಿ-ಮಗಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹೆಬ್ಬಾಳ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಗಾನಗರದ ಸಿಬಿರಸ್ತೆ ನಿವಾಸಿ ಸುರೇಖಾ (30) ಮತ್ತು ಆರಾಧ್ಯ (3) ಮೃತಪಟ್ಟ ತಾಯಿ-ಮಗಳು.
ಸಿಬಿ ರಸ್ತೆಯಲ್ಲಿ ಚಿಕ್ಕ ಹೋಟೆಲ್ ನಡೆಸುತ್ತಿರುವ ರಘು ಅಲಿಯಾಸ್ ರಾಘವೇಂದ್ರ ಎಂಬುವರು ಹಬ್ಬದ ಅಂಗವಾಗಿ ನಿನ್ನೆ ರಾತ್ರಿ ಪತ್ನಿ ಹಾಗೂ ಮಗಳನ್ನು ಕರೆದುಕೊಂಡು ಬೈಕ್‍ನಲ್ಲಿ ಸ್ನೇಹಿತನ ಮನೆಗೆ ಹೋಗಿದ್ದರು.

ರಾತ್ರಿ 11 ಗಂಟೆ ಸಮಯದಲ್ಲಿ ಬೈಕ್‍ನಲ್ಲಿ ಇವರು ಮನೆಗೆ ವಾಪಸಾಗುತ್ತಿದ್ದಾಗ ರಿಂಗ್‍ರಸ್ತೆಯ ಲುಂಬಿನಿಗಾರ್ಡ್‍ನ್ ಸಮೀಪ ಅತಿವೇಗವಾಗಿ ಮುನ್ನುಗ್ಗಿದ ಯಾವುದೋ ವಾಹನ ಇವರ ಬೈಕ್‍ಗೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಪತ್ನಿ ಸುರೇಖಾ ಹಾಗೂ ಮಗಳು ಆರಾಧ್ಯ ಸ್ಥಳದಲ್ಲೇ ಮೃತಪಟ್ಟಿದ್ದು, ರಘು ಅವರು ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದ ಹೆಬ್ಬಾಳ ಸಂಚಾರಿ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ತಾಯಿ-ಮಗಳ ಮೃತದೇಹವನ್ನು ಎಂಎಸ್‍ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ