ಎಬಿಡಿ ಆರ್‍ಸಿಬಿ ತಂಡದ ನೂತನ ನಾಯಕ ?

ಬೆಂಗಳೂರು:2019ರ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಆರ್‍ಸಿಬಿ ಆಡಳಿತ ಮಂಡಳಿ ನಾಯಕ ವಿರಾಟ್ ಕೊಹ್ಲಿಯನ್ನ ಕೆಳಗಿಳಿಸಿ ತಂಡದ ಪ್ರಮುಖ ಬ್ಯಾಟ್ಸ್‍ಮನ್ ಎಬಿಡಿ ವಿಲಿಯರ್ಸ್‍ನ್ನ ನಾಯಕನಾಗಿ ಮಾಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಇತ್ತಿಚೆಗಷ್ಟೆ ಮೇಜರ್ ಸರ್ಜರಿ ಮಾಡಿರುವ ಆರ್‍ಸಿಬಿ ತಂಡದ ಕೋಚ್ ಡೇನಿಯಲ್ ವೆಟ್ಟೊರಿ ಅವರನ್ನ ಕೈಬಿಟ್ಟು ಗ್ಯಾರಿ ಕಸ್ಟರ್ನ್‍ರನ್ನ ಮುಖ್ಯ ಕೋಚ್ ಆಗಿ ನೇಮಕ ಮಾಡಿತ್ತು. ತಂಡದ ಬೌಲಿಂಗ್ ಕೋಚ್ ಆಗಿ ಟೀಂ ಇಂಡಿಯಾದ ಮಾಜಿ ವೇಗಿ ಆಶೀಶ್ ನೆಹ್ರ ಅವರನ್ನ ನೇಮಕ ಮಾಡಿತ್ತು.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆರ್‍ಸಿಬಿ ತಂಡ ಕಳಪೆ ಅಟವಾಡಿ ಹೀನಾಯವಾಗಿ ಸೊಲುತ್ತಾ ಬಂದಿದೆ. ಈ ಕಾರಣಕ್ಕಾಗಿ ಆರ್‍ಸಿಬಿ ವಿರಾಟ್ ಕೊಹ್ಲಿ ಅವರನ್ನ ಕೆಳಗಿಳಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಆರ್‍ಸಿಬಿ ಹಣೆಬರಹ ಬದಲಿಸುತ್ತಾರಾ ಎಬಿಡಿ?
ಇತ್ತಿಚೆಗಷ್ಟೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಐಪಿಎಲ್‍ನ ಈ ಹಿಂದಿನ ಸೀಸನ್‍ಗಳಲ್ಲಿ ಆರ್‍ಸಿಬಿ ಪರ ಬೊಂಬಾಟ್ ಬ್ಯಾಟಿಂಗ್ ಮಾಡುತ್ತಾ ಬಂದಿದ್ದಾರೆ. ಇದೀಗ ನಾಯತ್ವದ ಜವಾಬ್ದರಿಯನ್ನ ಹೆಗಲಿಗೆ ಹಾಕಿಕೊಂಡು ತಂಡದ ಹಣೆಬರಹವನ್ನ ಬದಲಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ