ದೇವೆಗೌಡರ ಕುಟುಂಬ ಒಂದು ನಾಟಕ ಕಂಪನಿ: ಸಂಸದ ಜೋಶಿ

ಹುಬ್ಬಳ್ಳಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಹುಬ್ಬಳ್ಳಿ ಮನೆಗೆ ಎರಡರಿಂದ ಮೂರು ಬಾರಿ ಕೂಡ ಭೇಟಿ ನೀಡಿಲ್ಲ ಎಂದು ಸಂಸದ ಪ್ರಲ್ಹಾದ ಜೋಶಿ ವಾಗ್ದಾಳಿ ಮಾಡಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಖ್ಯಂಂತ್ರಿ ಕುಮಾರಸ್ವಾಮಿಯವರು ರಾಜ್ಯದ ಬೇರೆಬೇರೆ ಭಾಗದಲ್ಲಿ ಮನೆ ಮಾಡಿರಬಹುದು, ಆದರೆ, ಮಾಡಿದ ಮನೆಗೆ ೨ ರಿಂದ ೩ ಬಾರಿಯುಕೂಡಾ ಬೇಟಿ ನೀಡಿಲ್ಲಾ. ದೇವೆಗೌಡಾ ಆ್ಯಂಡ್ ಕಂಪನಿ ಒಂದು ದೂಡ್ಡ ನಾಟಕ ಕಂಪನಿಯಾಗಿದೆ. ಮುಖ್ಯಮಂತ್ರಿ ಯಾದ ಮೇಲೆ ಒಂದು ಬಾರಿಯೂ ಮುಖ್ಯಮಂತ್ರಿಗಳು ಹುಬ್ಬಳ್ಳಿ ಮನೆಗೆ ಬೇಟಿ ನೀಡಿಲ್ಲಾ. ಜನಕ್ಕೆ ಸುಳ್ಳು ಹೇಳಿ ನಾಟಕವಾಡಿ ಮುಖ್ಯಮಂತ್ರಿ ಗಳು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. ಉತ್ತರ ಕರ್ನಾಟಕದ ಅಭಿವೃದ್ದಿಗೆ ಸಂಭಂದಿಸಿದಂತೆ ಮುಖ್ಯಮಂತ್ರಿಗಳು ಸಾಕಷ್ಟು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ನೈರುತ್ಯ ರೈಲ್ವೆ ಕಛೇರಿ ಹುಬ್ಬಳ್ಳಿ ಗೆ ಬರುವ ಸಂದರ್ಭದಲ್ಲಿ ಹಾಗೂ ಸಧ್ಯ ಕೇಂದ್ರ ರಸರ್ಕಾರದ ಸಿ,ಆರ್,ಎಫ್ ಅನುದಾನ ಬಳಿಕೆಯಲ್ಲಿ ವಿಫಲರಾಗಿದ್ದಾರೆ.‌ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹುಬ್ಬಳ್ಳಿಗೆ ಬರಲು ಮುಖವಿಲ್ಲದಂತಾಗಿದೆ. ಹಾಗಾಗಿ ಹುಬ್ಬಳ್ಳಿಯಲ್ಲಿರುವ ತಮ್ಮ ಮನೆಯ ಬೋರ್ಡ ಕಿತ್ತುಕೊಂಡು ಹೋಗಿದ್ದಾರೆ ಎಂದ ಸಂಸದ ಜೋಶಿ, ದೇವೆಗೌಡ, ಕುಮಾರಸ್ವಾಮಿ ಜನರಿಗೆ ಮೊಸಾ ಮಾಡುವ ಒಂದು ಡ್ರಾಮಾ ಕಂಪನಿಯವರೆಂದು ದೇವೆಗೌಡರ ಕುಟುಂಬ ವಿರುದ್ಧ ಗುಡುಗಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ