ಕುದುರೆಗಾಡಿಯಿಂದ ಬಿದ್ದ ಯುವಕನ ಸಾವು

ಹುಬ್ಬಳ್ಳಿ- ಕುದುರೆ ಗಾಡಿ ಓಟದ ಸ್ಪರ್ಧೆಯಲ್ಲಿ ಯುವಕನೊಬ್ಬ ಗಾಡಿಯಿಂದ ಬಿದ್ದು ಆವನಪ್ಪಿದ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಬೂದನಗುಡ್ಡ ಬಸವಣ್ಣ ದೇವರ ಜಾತ್ರೆ ವೇಳೆ ನಡೆದ ಘಟನೆ ಎನ್ನಲಾಗುತ್ತಿದೆ. ಆದರೆ, ಈ ವಿಡಿಯೋ ಇಲ್ಲಿಯದಲ್ಲ ಎಂದು ಕಲಘಟಗಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿಜಯ ಬಿರಾದಾರ ಸ್ಪಷ್ಟಪಡಿಸಿದ್ದಾರೆ. ಶ್ರಾವಣದ ಕಡೇ ಸೋಮವಾರದ ನಿಮಿತ್ತ ನಿನ್ನೆ ಬೂದನ ಗುಡ್ಡ ಜಾತ್ರಾ ಮಹೋತ್ಸವ ಅಂಗವಾಗ ಬೈಕ್ ಮತ್ತು ಜಟಕಾ ಬಂಡಿಯ ರ್ಯಾಲಿ ನಡೆದಿಲ್ಲ. ಬೇರೆ ಈ ಸಂಬಂಧ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೇರೆ ಎಲ್ಲೋ ನಡೆದ ಘಟನೆಯನ್ನು ಕಲಘಟಗಿ ತಾಲೂಕಿನಲ್ಲಿ ನಡೆದಿದೆ ಎಂದು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಘಟನೆಯಲ್ಲಿ ಬಂಡಿಯಿಂದ ಕೆಳಗೆಬಿದ್ದ ವ್ಯಕ್ತಿಯ ಮೇಲೆ ಕುದುರೆಗಳು ಹಾಗೂ ಚಕ್ಕಡಿ ಹಾಯ್ದು ಹೋಗಿವೆ. ಕುದುರೆ ತುಳಿದ ರಭಸಕ್ಕೆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದ್ರೆ ಘಟನೆ ಎಲ್ಲಿ ನಡೆದಿದ್ದು ಎಂಬುದು ಗೊತ್ತಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ