ಸಿಗರೇಟ್ ಇಲ್ಲ ಎಂದಿದ್ದಕ್ಕೆ ಕೋಪಗೊಂಡ ಮೂವರು ಅಲ್ಲೇ ಇದ್ದ ಚಾಕುವಿನಿಂದ ಇಬ್ಬರು ನೌಕರರಿಗೆ ಇರಿದು ಪರಾರಿ

ಬೆಂಗಳೂರು, ಆ.31- ಬೇಕರಿಯೊಂದರಲ್ಲಿ ಸಿಗರೇಟ್ ಇಲ್ಲ ಎಂದಿದ್ದಕ್ಕೆ ಕೋಪಗೊಂಡ ಮೂವರು ಅಲ್ಲೇ ಇದ್ದ ಚಾಕುವಿನಿಂದ ಇಬ್ಬರು ನೌಕರರಿಗೆ ಇರಿದು ಪರಾರಿಯಾಗಿರುವ ಘಟನೆ ಬೆಳ್ಳಂದೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೋಗನಹಳ್ಳಿಯಲ್ಲಿ ವೈಷ್ಣವಿ ಬೇಕರಿ ಇದ್ದು, ರಾತ್ರಿ ಮೂವರು ಈ ಬೇಕರಿಗೆ ಬಂದು ಸಿಗರೇಟ್ ಕೇಳಿದ್ದಾರೆ. ಸಿಗರೇಟ್ ಇಲ್ಲ ಎಂದಿದ್ದಕ್ಕೆ ಏಕೆ ನೀವು ಮಾರಲ್ವಾ ಎಂದು ಪ್ರಶ್ನಿಸಿ ಬೇಕರಿ ನೌಕರರಾದ ಶಿವಪ್ಪ ಮತ್ತು ರತ್ನಾಕರ ಶೆಟ್ಟಿ ಅವರೊಂದಿಗೆ ಜಗಳವಾಡಿದ್ದಾರೆ.
ಮಾತಿಗೆ ಮಾತು ಬೆಳೆದಾಗ ಬ್ರೆಡ್ ಕತ್ತರಿಸಲು ಇಟ್ಟಿದ್ದ ಚಾಕುವಿನಿಂದ ಮೂವರು ಯುವಕರ ಪೈಕಿ ಒಬ್ಬಾತ ರತ್ನಾಕರಶೆಟ್ಟಿ ಮತ್ತು ಶಿವಪ್ಪಗೆ ಇರಿದು ಪರಾರಿಯಾಗಿದ್ದಾರೆ.
ಇರಿತದಿಂದ ಗಾಯಗೊಂಡ ಇವರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಈ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ