ಅಮರನಾಥ ಯಾತ್ರೆ ರದ್ದು

ಜಮ್ಮು:ಆ-೨೧: ಯಾತ್ರಾರ್ಥಿಗಳ ಕೊರತೆ ಹಿನ್ನಲೆಯಲ್ಲಿ ಜಮ್ಮುವಿನಿಂದ ಹೊರಡಬೇಕಿದ್ದ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ .

ಬೇಸ್ ಕ್ಯಾಂಪ್ ನಲ್ಲಿ ಯಾತ್ರಿಕರ ಆಗಮನದ ಆಧಾರದ ಮೇಲೆ ಯಾತ್ರೆ ಪುನಾರಂಭವಾಗಲಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಪೂಂಚ್ ಜಿಲ್ಲೆಯ ಭಗವತಿ ನಗರ ಬೇಸ್ ಕ್ಯಾಂಪ್ ನಿಂದ 449 ಯಾತ್ರಾರ್ಥಿಗಳ ತಂಡ ಅಮರನಾಥ ದರ್ಶನಕ್ಕೆ ತೆರಳಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.

ನಿನ್ನೆ, 43 ಯಾತ್ರಿಕರ ಚಿಕ್ಕ ತಂಡವು ದಕ್ಷಿಣ ಕಾಶ್ಮೀರ ಹಿಮಾಲಯದ 3,880 ಮೀಟರ್ ಎತ್ತರದ ಪವಿತ್ರ ಗುಹಾ ದೇವಾಲಯ ದರ್ಶನಕ್ಕಾಗಿ ತೆರಳಿದ್ದು, ಯಾತ್ರಾರ್ಥಿಗಳಾರೂ ಆಗಮಿಸದೆ ಇದ್ದ ಕಾರಣ ಈ ಸಮಯ ಯಾತ್ರೆಯನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಕ್ತರು ಮತ್ತೆ ಯಾತ್ರೆಗಾಗಿ ಬೇಸ್ ಕ್ಯಾಂಪ್ ಗೆ ಆಗಮಿಸಿದ್ದಾದರೆ ಪುನಃ ಯಾತ್ರೆ ಆರಂಭವಾಗಲಿದೆ.ಆಗಸ್ಟ್ 26 ರಂದು ತೀರ್ಥಯಾತ್ರೆ ಮುಕ್ತಾಯಗೊಳ್ಳುವ ಮೊದಲು ಬಂದವರಿಗೆ ದೇವಾಕ್ಲಯದಲ್ಲಿ ಪೂಜೆಗೆ ಅವಕಾಶ ಒದಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬಾಲ್ತಾಲ್ ಮತ್ತು ಪಹಲ್ಗಾಂಮ್ ಅವಳಿ ಮಾರ್ಗಗಳಿಂದ 60 ದಿನಗ ಅಮರನಾಥ ಯಾತ್ರೆ ಜೂನ್ 28 ರಂದು ಪ್ರಾರಂಭವಾಗಿತ್ತು. ಆದರೆ ಕಳೆದ ಹದಿನೈದು ದಿನಗಳಿಂದ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ.ಈ ವರೆಗೆ 2,83,140 ಯಾತ್ರಿಕರು ಗುಹಾ ದೇವಾಲಯಕ್ಕೆ ಭೇಟಿನೀಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ