ಫೆÇೀರ್ಟಿಸ್ ಆಸ್ಪತ್ರೆಯಿಂದ ಹೆಪಟೈಟಿಸ್ ಕುರಿತು ಜಾಗೃತಿ

 

ಬೆಂಗಳೂರು, ಆ.20-ಕನ್ನಿಂಗ್‍ಹ್ಯಾಂ ರಸ್ತೆಯ ಫೆÇೀರ್ಟಿಸ್ ಆಸ್ಪತ್ರೆಯು ಹೆಪಟೈಟಿಸ್ ಕುರಿತು ಜಾಗೃತಿ ಮೂಡಿಸಲು ಆರೋಗ್ಯಾಭಿಯಾನ ಆಯೋಜಿಸಿದ್ದು, 100 ಮಂದಿ ಪೆÇಲೀಸ್ ಸಿಬ್ಬಂದಿಗೆ ಹೆಪಟೈಟಿಸ್ ಲಸಿಕೆಯ ಮೂರು ಶಾಟ್‍ಗಳನ್ನು ಪೆÇಲೀಸ್ ಆಯುಕ್ತರ ಕಚೇರಿಯಲ್ಲಿ ನೀಡಲಾಯಿತು.
ಫೆÇೀರ್ಟಿಸ್ ಆಸ್ಪತ್ರೆ ತಜ್ಞ ವೈದ್ಯರಾದ ಡಾ. ಶ್ರೀನಿವಾಸ ಡಿ. ಮಾತನಾಡಿ, ಹೆಪಟೈಟಿಸ್ ಸದ್ದಿಲ್ಲದೇ ಕೊಲ್ಲುವ ಖಾಯಿಲೆಯಾಗಿದೆ. ಉದಾಹರಣೆಗೆ ಹೆಪಟೈಟಿಸ್ ಬಿ ಬಹಳ ಬೇಗನೆ ಹರಡುವ ರೋಗವಾಗಿದೆ. ಅತ್ಯಂತ ಕನಿಷ್ಠ ಪ್ರಮಾಣದ ರಕ್ತದಿಂದಲೇ ಈ ರೋಗದ ಸೋಂಕು ಹರಡಬಹುದೆಂದು ತಿಳಿದು ಬಂದಿದೆ.

ಹೆಪಟಟೈಟಿಸ್ ಲಸಿಕೆ ಕುರಿತು ಜಾಗೃತಿ ಬಹಳ ಕಡಿಮೆ ಇದೆ. ಕರ್ತವ್ಯ ಮತ್ತು ಜೀವನ ಶೈಲಿಗಳ ನಡುವೆ, ಜನರು ಆರೋಗ್ಯ ತಪಾಸಣೆ ಮತ್ತು ಲಸಿಕೆ ತೆಗೆದುಕೊಳ್ಳುವುದನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಗಂಭೀರ ಪಿತ್ತಜನಕಾಂಗ ಸಂಬಂಧಿ ರೋಗಗಳಾದ ಸಿರಾಸಿಸ್‍ಮತ್ತು ಕ್ಯಾನ್ಸರ್‍ಗೆ ದಾರಿಯಾಗ ಬಹುದು. ರೋಗ ಹರಡುವುದನ್ನು ತಡೆಯಲು ಗಮನ ಕೇಂದ್ರೀಕರಿಸಿ ಪ್ರಯತ್ನಗಳನ್ನು ನಡೆಸಬೇಕಿದೆ. ಈ ಅಭಿಯಾನದ ಮೂಲಕ ರೋಗದ ಹಾಜರಿ ಮತ್ತು ಅದನ್ನು ತಡೆಯುವ ಬಗ್ಗೆ ಜನರಿಗೆ ಜಾಗೃತಿ ನೀಡಲು ನಾವು ಇಚ್ಛಿಸುತ್ತೇವೆ ಎಂದರು
ಪೆÇಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಮಾತನಾಡಿ, ಭಾರತದಲ್ಲಿ ದೊಡ್ಡ ಸಂಖ್ಯೆಯ ಹೆಪಟೈಟಿಸ್ ಪ್ರಕರಣಗಳು ಇದ್ದು, ಈ ರೋಗ ಹರಡುವುದನ್ನು ತಡೆಯುವುದಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಈ ರೋಗ ಕುರಿತು ಜಾಗೃತಿ ಹರಡಲು ಫೆÇೀರ್ಟಿಸ್‍ನೊಂದಿಗೆ ಸಹಯೋಗ ಹೊಂದಲು ಹೆಪಟೈಟಿಸ್ ಲಸಿಕೆಯ ಪ್ರಾಮುಖ್ಯತೆ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ನಾವು ಹರ್ಷಿಸುತ್ತೇವೆ. ಬೆಂಗಳೂರು ಪೆÇಲೀಸ್ ಇಲಾಖೆ ಸಮಾಜದ ಒಳಿತಿಗಾಗಿ ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ