ರಾಜ್ಯ ಸರ್ಕಾರಿ ನೌಕರರ ಸಂಘದ ಮಹತ್ವದ ಸಭೆ

Varta Mitra News

 

ಬೆಂಗಳೂರು, ಆ.20-ಕೊಡಗಿನಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಸಂತ್ರಸ್ಥರ ನೆರವು ನೀಡುವ ಸಂಬಂಧ ಇಂದು ಸಂಜೆ ರಾಜ್ಯ ಸರ್ಕಾರಿ ನೌಕರರ ಸಂಘದ ಮಹತ್ವದ ಸಭೆ ನಡೆಯಲಿದೆ.
ಸಂತ್ರಸ್ಥರ ನೆರವಿಗೆ ನೌಕರರ ಒಂದು ದಿನದ ವೇತನ ನೀಡುವ ಸಂಬಂಧ ಸಂಘದ ಅಧ್ಯಕ್ಷ ಎಚ್.ಕೆ.ರಾಮು ಸಭೆ ಕರೆದಿದ್ದಾರೆ. ಸಂಜೆ ಸಂಘದ ಪದಾಧಿಕಾರಿಗಳು ಹಾಗೂ ಎಲ್ಲ ಜಿಲ್ಲೆಗಳ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ದೇಣಿಗೆ ನೀಡುವ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈಗಾಗಲೇ ಶಿಕ್ಷಕರ ಸಂಘಟನೆ ಸೇರಿದಂತೆ ಕೆಲವು ಸಂಘಟನೆಗಳು ಕೊಡಗಿನ ಸಂತ್ರಸ್ಥರಿಗೆ ಒಂದು ದಿನದ ವೇತನ ನೀಡುವುದಾಗಿ ಪ್ರಕಟಿಸಿವೆ.
ರಾಜ್ಯ ಪೆÇಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕೂಡ ಒಂದು ದಿನದ ವೇತನ ನೀಡಲು ತೀರ್ಮಾನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ