ರೌಡಿಶೀಟರ್ ಶೋಕಾಸ್ ನೋಟಿಸ್

ಹುಬ್ಬಳ್ಳಿ- ವಾಣಿಜ್ಯ ನಗರಿಯ ಕುಖ್ಯಾತ ರೌಡಿ ಶೀಟರ್ ಲಾಜರಸ್ ಗೆ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ್ ಶೋಕಾಸ್ ನೋಟಿಸ್ ನೀಡಿದ್ದಾರೆ. ಕೇಶ್ವಾಪೂರ ಪೊಲೀಸ್ ಠಾಣೆ ಇನ್ಸಪೆಕ್ಟರ್, ಲಾಜರಸ್ ನ್ನ ಗಡಿಪಾರಿಗೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಆಯುಕ್ತರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ತನ್ನ ವಿರುದ್ಧ ಇರುವ ಅಪಾದನೆಗಳಿಗೆ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದ್ದು, ನೋಟಿಸ್ ಗೆ ಸರಿಯಾಗಿ ಉತ್ತರಿಸದಿದ್ದರೆ.ಗಡಿಪಾರು ಮಾಡಲು ಪೊಲೀಸ್ ಆಯುಕ್ತರು ಚಿಂತನೆ‌ ನಡೆಸಿದ್ದಾರೆ. ಲ್ಯಾಂಡ ಡೀಲರ್ , ಚೀಟಿಂಗ್ ಹಾಗೂ ರೌಡಿಸಂ ಕೇತ್ಯಗಳಲ್ಲಿ ಭಾಗಿಯಾಗಿರುವದರಿಂದ ಈತನ ವಿರುದ್ದ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ 10 ಕ್ಕೂ ಹೆಚ್ಚು ಠಾಣೆಗಳಲ್ಲಿ ಈತನ ವಿರುದ್ದ ಪ್ರಕರಣ ಇವೆ. ಹೀಗಾಗಿ ಕೇಶ್ವಾಪೂರ ಪೊಲೀಸು ಆತನನ್ನ ಗಡಿಪಾರು ಮಾಡುವಂತೆ ಪೊಲೀಸ್ ಆಯುಕ್ತರಿಗೆ ಶಿಫಾರಸ್ಸು ಮಾಡಿದ್ದರು. ಸದ್ಯ ಆತನಿಗೆ ಶೋಕಾಸ್ ನೋಟಿಸ್ ನೀಡಿರುವ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಲು ಚಿಂತನೆ ನಡೆಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ