ಬೇರೆ ಪಕ್ಷದತ್ತ ಮಾತನಾಡುವ ಯಡಿಯೂರಪ್ಪ ಮೊದಲು ತಮ್ಮ ಪಕ್ಷ ದುರಸ್ತಿ ಮಾಡಲಿ

ಧಾರವಾಡ:ಆ-14: ಅತೀ ದುಃಖ‌ ಆದಾಗ ಸಂತೋಷವಾದಾಗ ಕಣ್ಣಲ್ಲಿ ನೀರು ಬರುತ್ತೆ. ನಮ್ಮ ಮುಖ್ಯಮಂತ್ರಿ ರೈತರಿಗೆ ಆದ ಕಷ್ಟಕ್ಕೆ ಕಣ್ಣಲ್ಲಿ ನೀರು ಹಾಕಿದ್ದಾರೆ. ಕೆಲವರಿಗೆ ಅಂತಕರಣ ಇರಲ್ಲ, ನಮ್ಮ ಸಿಎಂ ಹಾಗಿಲ್ಲ ಎಂದು ತೋಟಗಾರಿಕೆ ಇಲಾಖೆ ಸಚಿವ ಎಂ ಸಿ ಮನಗುಳಿ ಹೇಳಿದ್ದಾರೆ.

ಯಾವ ಸಿಎಂ ರೈತರ ಸಾಲ‌ ಮನ್ನಾ ಮಾಡಿದ್ರು, ಹೆರಿಗೆ ಸವಲತ್ತು ಕೊಟ್ಟಿದ್ದೆವೆ. ಜನರು ಗಣನೆಗೆ ಅದನ್ನ ತೆಗೆದುಕೊಂಡಿಲ್ಲ. ಯಡಿಯೂರಪ್ಪ ಬೇರೆ ಪಕ್ಷದ ಬಗ್ಗೆ ಮಾತನಾಡ್ತಾರೆ, ಅವರು ತಮ್ಮ ಪಕ್ಷದ ದುರಸ್ತಿ ಮಾಡಲಿ ಅಂತಾ ಮನಗೂಳಿ ವಿರೋಧ ಪಕ್ಷಗಳಿಗೆ ಚಾಟಿ ಬಿಸಿದ್ದಾರೆ.

ನಮ್ಮ ಸರ್ಕಾರ ೫ ವರ್ಷ ಪೂರೈಸುತ್ತೆ, ಸಮ್ಮಿಶ್ರ ಸರ್ಕಾರ ಒಂದೇ, ಯಾರು ‌ಕಾಡುತ್ತಿಲ್ಲ, ಎಲ್ಲ ಸಚಿವರು ತಮ್ಮ ತಮ್ಮ ಇಲಾಖೆಯ ಅಭಿವೃದ್ಧಿ ಕೆಲಸ ಮಾಡುತಿದ್ದಾರೆ. ಉತ್ತರ ಕರ್ನಾಟಕಕ್ಕೆ ಏನು ಅನ್ಯಾಯವಾಗಿಲ್ಲ, ರಾಜಕೀಯ ಗಿಮಿಕ್ ಅದು ಎಲ್ಲ ರೀತಿಯ ಸೌಲಭ್ಯ ನೀಡಲಾಗುತ್ತಿದೆ. ಅದಕ್ಕೆ ಹಣವನ್ನ ಸಹ ಕೊಡಲಾಗಿದೆ, ಆದರೆ ಖರ್ಚು ಮಾಡಿಲ್ಲ, ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಿಲ್ಲ. ಹಿಂದಿನ ಯೋಜನೆಗಳನ್ನ ನಾವು ಕಟ್ ಮಾಡಿಲ್ಲಾ, ಎಲ್ಲ ಜಾರಿಗೆ ತರುವ ಕೆಲಸ ಮಾಡುತಿದ್ದೆವೆ. ನಮ್ಮ ರಾಜ್ಯಾಧ್ಯಕ್ಷರು, ದೆಡವೆಗೌಡರು ಸೇರಿ ಮುಂದಿನ ಲೋಕಸಭಾ ಚುನಾವಣೆ ಮೈತ್ರಿ‌ ಬಗ್ಗೆ ತಿರ್ಮಾನ ಮಾಡ್ತಾರೆ ಎಂದರು.

ತೋಟಗಾರಿಕೆ ಇಲಾಖೆ ಸಚಿವ ಸ್ಥಾನ ಅತ್ಯಂತ ಹಿರಿಯರಿಗೆ ಯಾಕೆ ಕೊಡಲಾಗುತ್ತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅದು ಲಾಟರಿ ಹೊಡದಿದೆ, ಶಾಮನೂರ ಶಿವಶಂಕರಪ್ಪನವರಿಗೂ ಲಾಟರಿ ಹೊಡೆದಿತ್ತು ಎಂದು ಸಚಿವರು ನಕ್ಕರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ