ಕೆ.ಆರ್​. ಪೇಟೆ ತಹಸೀಲ್ದಾರ್​ ಕಿಡ್ನ್ಯಾಪ್ ಶಂಕೆ

ಮಂಡ್ಯ:ಆ-2: ಮಂಡ್ಯಜಿಲ್ಲೆಯ ಕೆ.ಆರ್​. ಪೇಟೆ ತಾಲೂಕಿನ ತಹಸೀಲ್ದಾರ್​ ಮಹೇಶ್​ ಚಂದ್ರ ಅವರು ನಾಪತ್ತೆಯಾಗಿದ್ದು, ಅವರು ಅಪಹರಣಕ್ಕೆ ಒಳಗಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಮೈಸೂರಿನ ಕೆ.ಆರ್​. ನಗರದಿಂದ ಬೆಂಗಳೂರಿಗೆ ತೆರಳುವುದಾಗಿ ಹೊರಟಿದ್ದರು. ಆದರೆ, ಅವರ ಕಾರು ಕೆ.ಆರ್​. ನಗರದ ಚಿಕ್ಕ ಮಡ್ಡರಗುಡಿ ಬಳಿ ಪತ್ತೆಯಾಗಿದ್ದು, ಅವರು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾರೆ. ಕಾರಿನೊಳಗೆ ಮಹೇಶ್​ ಚಂದ್ರ ಅವರು ಧರಿಸಿದ್ದ ಶರ್ಟ್​ ಹರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಜತೆಗೆ ಕಾರಿನ ಬಳಿ ಮಹೇಶ್​ ಧರಿಸಿದ್ದ ಶೂ ಪತ್ತೆಯಾಗಿದೆ.

ಮಹೇಶ್​ ಚಂದ್ರ ಅವರು ಈ ಹಿಂದೆ ಕೆ.ಆರ್​. ನಗರ ತಾಲೂಕಿನ ತಹಸೀಲ್ದಾರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ವಾರದ ಹಿಂದೆ ಅವರನ್ನು ಕೆ.ಆರ್​. ಪೇಟೆ ತಹಸೀಲ್ದಾರ್​ ಆಗಿ ವರ್ಗ ಮಾಡಲಾಗಿತ್ತು. ಗುರುವಾರ ಸಂಜೆ 7.30ಕ್ಕೆ ವಿಭಾಗಾಧಿಕಾರಿಯೊಂದಿಗೆ ಸಭೆ ಮುಗಿಸಿ, ಪ್ರವಾಸಿ ಮಂದಿರದಲ್ಲಿ ಸ್ವಲ್ಪ ಹೊತ್ತು ಇದ್ದು ರಾತ್ರಿ 8.45ಕ್ಕೆ ಕೆ.ಆರ್.ನಗರದ ತಮ್ಮ ಮನೆಯತ್ತ ಹೊರಟಿದ್ದಾರೆ. ನಂತರ, ಇವರ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿಲ್ಲ. ತಾಯಿಗೆ ಅನಾರೋಗ್ಯ ಎಂದು ಶುಕ್ರವಾರ ಮತ್ತು ಶನಿವಾರ ರಜೆ ತೆಗೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಕೆ.ಆರ್.ನಗರ ತಾಲೂಕಿನ ಭೇರ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ನಾಪತ್ತೆಯಾಗಿರುವ ಮಹೇಶ್​ ಚಂದ್ರ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

K R Pate,Tahsildar, Mahesh chandra,Kidnap

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ