ನಮ್ಮ ಅಪ್ಪಾಜಿ ಕ್ಯಾಂಟೀನ್‍ಗೆ ಒಂದು ವರ್ಷ

 

ಬೆಂಗಳೂರು,ಆ.3- ನಗರದ ಬಸವನಗುಡಿ ಹನುಮಂತನಗರದಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಸ್ಥಾಪಿಸಿರುವ ನಮ್ಮ ಅಪ್ಪಾಜಿ ಕ್ಯಾಂಟೀನ್ ನಾಳೆಗೆ ಒಂದು ವರ್ಷ ಪೂರೈಸಲಿದೆ.
ನಮ್ಮ ಅಪ್ಪಾಜಿ ಕ್ಯಾಂಟೀನ್‍ನ ಮೊದಲನೆ ವಾರ್ಷಿಕೋತ್ಸವ ಪ್ರಯುಕ್ತ ಭೋಜನ ಪ್ರಿಯರಿಗಾಗಿ ಸ್ಪರ್ಧೆ ಏರ್ಪಡಿಸಲಾಗಿದೆ.
ದಕ್ಷಿಣ ಕರ್ನಾಟಕ ಮೂಲದ ರಾಗಿಮುದ್ದೆ ಬಸ್ಸಾರು, ಉತ್ತರ ಕರ್ನಾಟಕ ಮೂಲದ ಜೋಳದ ರೊಟ್ಟಿ ಎಣ್‍ಗಾಯಿ ಭೋಜನ ಸ್ಪರ್ಧೆ ನಾಳೆ ನಡೆಯಲಿದೆ.
ಈ ಭೋಜನವನ್ನು ಸಂಘಟಕರು ಕೊಡುವ ಸಮಯದೊಳಗೆ ಎಷ್ಟು ಎನ್ನುತ್ತಾರೆ ಎಂಬುದೇ ಮುಖ್ಯ. ಮೊದಲು ನೊಂದಾಯಿಸಿದ 10 ಜನರಿಗೆ ಪ್ರಥಮ ಆದ್ಯತೆ ಇರುತ್ತದೆ. ಪ್ರಥಮ ಬಹುಮಾನ 30 ದಿನಗಳ ಉಪಹಾರ, ಮಧ್ಯಾಹ್ನದ ಭೋಜನ ಉಚಿತವಿರುತ್ತದೆ. ದ್ವಿತೀಯ ಬಹುಮಾನ 20 ದಿನಗಳ ಉಪಹಾರ, ಮಧ್ಯಾಹ್ನ ಭೋಜನ ಉಚಿತ. ತೃತೀಯ ಬಹುಮಾನ 10 ದಿನಗಳ ಉಪಹಾರ, ಮಧ್ಯಾಹ್ನ ಭೋಜನ ಉಚಿತ.
ಹೆಚ್ಚಿನ ವಿವರಗಳಿಗೆ ಹಾಗೂ ಹೆಸರು ನೋಂದಾಯಿಸಲು 8553466275 ಸಂಪರ್ಕಿಸಬಹುದಾಗಿದೆ. ವಿಜೇತರಿಗೆ ನಮ್ಮ ಅಪ್ಪಾಜಿ ಕ್ಯಾಂಟೀನ್ ಕೂಪನ್ ನೀಡಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ