ಈ ಬಾರಿ ಭದ್ರಾ ಜಲಾಶಯ ತುಂಬಲು ಕಾರಣವೇನು ಗೊತ್ತಾ…!

ಶಿವಮೊಗ್ಗ:ಜು-೨೯; ಈ ಬಾರಿ ಭದ್ರಾ ಜಲಾಶಯ ತ್ಯುಂಬಲು ಕಾರಣ ಬಿ ಕೆ ಸಂಗಮೇಶ್ವರ್ ಅವರು ಶಾಶಕರಾಗಿ ಆಯ್ಕೆಯಾಗಿರುವುದಂತೆ. ಹಾಗಂತ ಸ್ವತ: ಶಾಸಕ ಸಂಗಮೇಶ್ವರ್ ಅವರೇ ಹೇಳಿದ್ದಾರೆ.

ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ವರ್, ನಾನು ಅದೃಷ್ಟದ ಶಾಸಕ. ನಾನು ಶಾಸಕನಿದ್ದಾಗಲೆಲ್ಲ ಭದ್ರಾ ಜಲಾಶಯ ತುಂಬಿದೆ. ಸೋತಾಗ ತುಂಬಿಲ್ಲ ಎಂದಿದ್ದಾರೆ.

ಈ ಬಾರಿ ಜಲಾಶಯ ತುಂಬಿದೆ. ಕಾರಣ ನಾನು ಈ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಭದ್ರಾ ಜಲಾಶಯ ಅವಧಿಗೂ ಮೊದಲು ಭರ್ತಿಯಾಗಿದೆ ಎಂದಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದಿರುವ ಏಕೈಕ ಕಾಂಗ್ರೆಸ್​ ಶಾಸಕ ನಾನು. ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ನನಗೆ ಸಚಿವ ಸ್ಥಾನ ನೀಡಲು ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಬೋರ್ಡ್​ ಅಧ್ಯಕ್ಷ ಸ್ಥಾನ ನೀಡಿದರೆ ನಾನು ನಿರಾಕರಿಸುತ್ತೇನೆ ಎಂದು ಹೇಳಿದರು.

Bhadravati MLA B K Sangameshwar,Badra Dam,Bagina samarmane

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ