ಲಾರಿಯಿಂದ ರಸ್ತೆಯಲ್ಲಿ ಬಿದ್ದ ಈರುಳ್ಳಿ ಮೂಟೆ: ಸಿಕ್ಕಷ್ಟು ಮೊಗೆದುಕೊಂಡು ಹೋದ ಜನರು

ಬೆಂಗಳೂರು:ಜು-೨೨:ಚಲಿಸುತ್ತಿದ್ದ ಲಾರಿಯಿಂದ ಈರುಳ್ಳಿ ಮೂಟೆಗಳು ಕೆಳಗೆ ಬಿದ್ದ ಪರಿಣಾಮ ಈರುಳ್ಳಿಗಳೆಲ್ಲಾ ರೋಡ್ ತುಂಬ ಚಲ್ಲಾಪಿಲ್ಲಿಯಾಗಿ ಹರಡಿಬಿದ್ದಿದ್ದು, ನೋಡನೋಡುತ್ತಿದ್ದಂತೆಯೇ ಜನರು ರಸ್ತೆಯಲ್ಲಿ ಬಿದ್ದ ಈರುಳ್ಳಿಗಳನ್ನು ಸಿಕ್ಕಷ್ಟು ಎತ್ತಿಕೊಂಡು ಹೋದ ಘಟನೆ ತುಮಕೂರು-ಬೆಂಗಳುರು ಹೆದ್ದಾರಿಯಲ್ಲಿ ನಡೆದಿದೆ.

ಬೆಳಗ್ಗೆ ಲಾರಿಯೊಂದರಲ್ಲಿ ತುಂಬ ಈರುಳ್ಳಿ ಮೂಟೆಗಳನ್ನು ಸಾಗಿಸಲಾಗುತ್ತಿತ್ತು. ಆದರೆ ಲಾರಿ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಸಾಗುತ್ತಿದ್ದಾಗ ಚಾಲಕನ ಗಮನಕ್ಕೆ ಬಾರದೆ ಹೆದ್ದಾರಿಯಲ್ಲಿ ಅಲ್ಲಲ್ಲಿ ಮೂಟೆಗಳು ಉರುಳಿ ಬಿದ್ದಿವೆ. ಆ ಮೂಟೆಗಳಿಂದ ಈರುಳ್ಳಿಗಳು ರಸ್ತೆಯಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಸ್ಥಳದಲ್ಲಿದ್ದ ಜನರು ಸಿಕ್ಕಿದ್ದೇ ಚಾನ್ಸ್​ ಎಂದು ಚೀಲ, ಬ್ಯಾಗ್​ನಲ್ಲಿ ಸಿಕ್ಕಷ್ಟು ಈರುಳ್ಳಿ ಎತ್ತಿಕೊಂಡು ಹೋಗಿದ್ದಾರೆ.

Tumkur-Bangalore Road,onion

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ