ಮಾಸಾಂತ್ಯಕ್ಕೆ `ಸಂಕಷ್ಟ ಕರ ಗಣಪತಿ’ ತೆರೆಗೆ

ಡೈನಾಮೆಟ್ ಫಿಲಂಸ್ ಲಾಂಛನದಲ್ಲಿ ರಾಜೇಶ್ ಬಾಬು, ಫೈಜಾನ್ ಖಾನ್, ಜೋಡಿದಾರ್ ಬಿ.ಎಸ್.ಹೇಮಂತ್ಕುಮಾರ್, ಪ್ರಮೋದ್ ನಿಂಬಾಳ್ಕರ್ ಹಾಗೂ ಚಲುವರಾಜ್ ನಾಯ್ಡು ಅವರು ನಿರ್ಮಿಸಿರುವ `ಸಂಕಷ್ಟ ಕರ ಗಣಪತಿ` ಚಿತ್ರ ಮಾಸಾಂತ್ಯಕ್ಕೆ (ಜುಲೈ 27)ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲ್ಲೇ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಜನಮನಸೂರೆಗೊಂಡಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅರ್ಜುನ್ ಕುಮಾರ್ ಎಸ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಉದಯ್ ಲೀಲ ಛಾಯಾಗ್ರಹಣ, ವಿಜೇತ್ ಚಂದ್ರ, ಮಧುಕುಮಾರ್ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೆಶನವಿರುವ ಈ ಚಿತ್ರದ ನಾಯಕರಾಗಿ ಲಿಖಿತ್ ಶೆಟ್ಟಿ ಅಭಿನಯಿಸಿದ್ದಾರೆ. ಶ್ರುತಿ ಗೊರಾಡಿಯ ಈ ಚಿತ್ರದ ನಾಯಕಿ. ಅಚ್ಯುತಕುಮಾರ್, ಮಂಜುನಾಥ್ ಹೆಗಡೆ, ಚಮ್ದು ಗೌಡ, ನಾಗಭೂಷಣ್, ರೇಖಾಸಾಗರ್, ಮನದೀಪ್ ರಾಯ್, ವಿಜಯ್ ಕೌಂಡಿನ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ