ಮೊಬೈಲ್ ಕದ್ದು ಪರಾರಿಯಾಗಿದ್ದ ಚಾಲಕನ ಬಂಧನ

ಮೈಸೂರು,ಜು.20- ಪ್ರಯಾಣಿಕನಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಆಟೋ ಚಾಲಕನನ್ನು ದೇವರಾಜ ಠಾಣೆ ಪೆÇಲೀಸರು ಬಂಧಿಸಿ ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ.
ಎಸ್.ಮಂಜುನಾಥ ಬಂಧಿತ ಆಟೋ ಚಾಲಕ. ಮೂಲತಃ ಮೈಸೂರಿನ ವ್ಯಕ್ತಿಯೊಬ್ಬರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಜೂ.4ರಂದು ಬೆಂಗಳೂರಿನಿಂದ ಮೈಸೂರಿಗೆ ರೈಲ್ವೆಯಲ್ಲಿ ಬಂದಿದ್ದಾರೆ.
ರೈಲ್ವೆ ನಿಲ್ದಾಣದಿಂದ ಮೇಟಗಳ್ಳಿಯ ತಮ್ಮ ನಿವಾಸಕ್ಕೆ ತೆರಳಲೆಂದು ವ್ಯಕ್ತಿಯು ಆಟೋ ಚಾಲಕ ಮಂಜುನಾಥನನ್ನು ಕರೆದಿದ್ದಾರೆ. ಮಂಜುನಾಥ್ 300 ರೂ. ಆಗುತ್ತದೆ ಎಂದು ಹೇಳಿದ್ದಾನೆ. ಇದಕ್ಕೆ ಒಪ್ಪದ ಆ ವ್ಯಕ್ತಿ ನಡೆದುಕೊಂಡೇ ಹೊರಟ್ಟಿದ್ದಾರೆ. ಇವರನ್ನು ಹಿಂಬಾಲಿಸಿದ ಚಾಲಕ ಕಡಿಮೆ ಹಣವನ್ನು ನೀಡುವಂತೆ ಹೇಳಿ ವ್ಯಕ್ತಿಯನ್ನು ಆಟೋಗೆ ಹತ್ತಿಸಿಕೊಂಡಿದ್ದಾನೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಮತ್ತೆ 300 ರೂ. ನೀಡುವಂತೆ ಒತ್ತಾಯಿಸಿದ್ದಾನೆ. ಆ ವ್ಯಕ್ತಿ ಹಣ ನೀಡಲು ಒಪ್ಪದೇ ಇದ್ದಾಗ ಅವರ ಬಳಿ ಇದ್ದ ಬೆಲೆ ಬಾಳುವ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ. ಪ್ರಯಾಣಿಕ ಈ ಬಗ್ಗೆ ದೇವರಾಜ ಠಾಣೆ ಪೆÇಲೀಸರಿಗೆ ದೂರು ನೀಡಿದ್ದಾರೆ. ದಾಖಲಿಸಿಕೊಂಡ ಪೆÇಲೀಸರು ಕಾರ್ಯಾಚರಣೆ ನಡೆಸಿ ಆಟೋ ಚಾಲಕ ಮಂಜುನಾಥ್‍ನನ್ನು ಬಂಧಿಸಿ ಸ್ಯಾಮ್‍ಸಂಗ್ ಜೆ7 ಪ್ರೈಮ್ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ