ಪತ್ನಿಯ ಶೀಲ ಶಂಕಿಸಿ ಕೊಂದ ಯೋಧ!

Varta Mitra News

ರಾಯ್‍ಪುರ್, ಜು.19-ಪತ್ನಿಯ ಶೀಲ ಶಂಕಿಸಿದ ಯೋಧನೊಬ್ಬ ಆಕೆ ಗುಪ್ತಾಂಗಕ್ಕೆ ವಿದ್ಯುತ್ ಶಾಕ್ ನೀಡಿ ಕೊಂದಿರುವ ಬರ್ಬರ ಘಟನೆ ಛತ್ತೀಸ್‍ಗಢದ ರಾಜಧಾನಿ ರಾಯ್‍ಪುರ್‍ನಲ್ಲಿ ನಡೆದಿದೆ.
ರಾಯ್‍ಪುರ್‍ನ ಬಲೊದಾಬಜಾರ್-ಭಾತಾಪಾರ ಜಿಲ್ಲೆಯಲ್ಲಿ ಈ ಹೀನ ಕೃತ್ಯ ನಡೆದಿದ್ದು, ಛತ್ತೀಸ್‍ಗಢ ಸಶಸ್ತ್ರ ಪಡೆ(ಸಿಎಎಫ್) ಯೋಧ ಸುರೇಶ್ ಮಿರಿ(33) ಎಂಬಾತನನ್ನು ಮುಂಗೆಲಿ ಜಿಲ್ಲೆಯ ಸರಗಾಂವ್ ಪೆÇಲೀಸರು ಬಂಧಿಸಿದ್ದಾರೆ. ಈತ ದಂತೇವಾಡ ಜಿಲ್ಲೆ ಸಿಎಎಫ್‍ನ 6ನೇ ಬೆಟಾಲಿಯನ್‍ನಲ್ಲಿ ಬಾಣಸಿಗನಾಗಿದ್ದ. ತನ್ನ ಪತ್ನಿ ಲಕ್ಷ್ಮೀ(27) ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ತಾನು ಆಕೆಯನ್ನು ಕೊಂದಿರುವುದಾಗಿ ಸುರೇಶ್ ವಿಚಾರಣೆ ವೇಳೆ ತಪೆÇ್ಪಪ್ಪಿಕೊಂಡಿದ್ದಾನೆ ಎಂದು ಸರಗಾಂವ್ ಪೆÇಲೀಸ್ ಔಟ್ ಪೆÇೀಸ್ಟ್ ಎಎಸ್‍ಐ ಪರಸ್ ರಾಮ್ ಜಗತ್ ತಿಳಿಸಿದ್ದಾರೆ. ಸುರೇಶ್ ಮತ್ತು ಲಕ್ಷ್ಮೀ ತಮ್ಮಿಬ್ಬರು ಮಕ್ಕಳೊಂದಿಗೆ ಭಾತಪಾರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಾಸವಾಗಿದ್ದರು. ತನ್ನ ಪತ್ನಿಯ ಶೀಲ ಶಂಕಿಸಿ ಸುರೇಶ್ ಅಗಾಗ ಆಕೆಯೊಂದಿಗೆ ಜಗಳವಾಡುತ್ತಿದ್ದ. ನಿನ್ನೆ ಬೆಳಗ್ಗೆಯೂ ಇದೇ ವಿಷಯಕ್ಕಾಗಿ ಇಬ್ಬರ ನಡುವೆ ಜಗಳವಾಗಿತ್ತು. ಲಕ್ಷ್ಮೀ ಬಟ್ಟೆ ಒಗೆಯುತ್ತಿದ್ದಾಗ ಆಕೆಗೆ ಸುರೇಶ್ ಚೆನ್ನಾಗಿ ಥಳಿಸಿದ. ಇದರಿಂದ ಆಕೆ ಪ್ರಜ್ಞಾಶೂನ್ಯಳಾದಳು. ನಂತರ ಸುರೇಶ್ ವಿದ್ಯುತ್ ತಂತಿ ಸಹಾಯದಿಂದ ಆಕೆಯ ಗುಪ್ತಾಂಗಕ್ಕೆ ಕರೆಂಟ್ ಶಾಕ್ ನೀಡಿದ. ಇದರಿಂದ ಲಕ್ಷ್ಮೀ ಸ್ಥಳದಲ್ಲೇ ಮೃತಪಟ್ಟಳು. ಬಳಿಕ ಲಕ್ಷ್ಮೀ ಪೆÇೀಷಕರಿಗೆ ದೂರವಾಣಿ ಕರೆ ಮಾಡಿದ ಆತ, ಅನಾರೋಗ್ಯದಿಂದ ಮೃತಪಟ್ಟಿದ್ದಾಗಿ ತಿಳಿಸಿದ. ಆದರೆ ಲಕ್ಷ್ಮೀ ಮೃತದೇಹ ನೋಡಿ ಅನುಮಾನಗೊಂಡ ಅವರು ಪೆÇಲೀಸರಿಗೆ ದೂರು ನೀಡಿದರು. ನಂತರ ಪೆÇಲೀಸರು ಆತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ