ಆಕಸ್ಮಿಕ ಬೆಂಕಿಯಿಂದ ಹಸು ಮತ್ತು ಕುರಿಗಳ ದಹನ

ಮಾಗಡಿ, ಜು.15-ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ಬಿದ್ದು 30 ಕುರಿಗಳು ಹಾಗೂ ಮೂರು ಹಸುಗಳು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಗಲಕೋಟೆಗೆ ಹೊಂದಿಕೊಂಡಿರುವ ಕಾಡು ಗೊಲ್ಲರಹಟ್ಟಿಯ ಕೆಂಪಣ್ಣ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.
ಕೆಂಪಣ್ಣ ಮನೆಗೆ ಹೊಂದಿಕೊಂಡಂತೆ ಜಾನುವಾರುಗಳನ್ನು ಕಟ್ಟಲು ತೆಂಗಿನ ಗರಿಗಳ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದರು. ನಿನ್ನೆ ಮಧ್ಯರಾತ್ರಿ ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ಬಿದ್ದಿದೆ. ಇದರಿಂದ 30 ಕುರಿಗಳು ಹಾಗೂ 3 ಹಸುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ತಹಸೀಲ್ದಾರ್ ಎಂ.ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಶಾಸಕ ಎ.ಮಂಜುನಾಥ್ ಕೂಡ ಭೇಟಿ ನೀಡಿ ಕೆಂಪಣ್ಣನನ್ನು ಸಮಾಧಾನಪಡಿಸಿ ಪರಿಹಾರ ಕೊಡಿಸುವುದಾಗಿ ಹೇಳಿ ಹೋಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ