ಕದ್ದ ಕಳರ ಬಂಧನ

ಮೈಸೂರು, ಜು.15-ಅಂಗಡಿಗಳಿಗೆ ಕನ್ನ ಹಾಕಿ ಕಳವು ಮಾಡುತ್ತಿದ್ದ ಇಬ್ಬರು ಕನ್ನಕಳ್ಳರನ್ನು ಆಲನಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಕಡಕೊಳ ಗ್ರಾಮದ ರಂಗಸ್ವಾಮಿ (23) ತಮಿಳುನಾಡಿನ ಈರೋಡು ಜಿಲ್ಲೆ ಸತ್ಯಮಂಗಲ ತಾಲೂಕು ತಾಳವಾಡಿ ಗ್ರಾಮದ ಶಿವಣ್ಣ (19) ಬಂಧಿತ ಆರೋಪಿಗಳು.
ಆರೋಪಿಗಳು ನಗರದ ಆಲನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಳ್ಳಿಯ ಟಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ರಾಂದೇವ್ ಬ್ಯಾಂಕರ್ಸ್ ಅಂಡ್ ಜ್ಯುವಲರ್ಸ್ ಅಂಗಡಿಗೆ ಕನ್ನ ಹಾಕಿ ಚಿನ್ನದ ಆಭರಣ, ಬೆಳ್ಳಿ ವಸ್ತುಗಳು ಹಾಗೂ ಫ್ಯಾನ್ಸಿ ಒಡವೆಗಳನ್ನು ದೋಚಿದ್ದರು.
ಈ ಬಗ್ಗೆ ದೂರು ದಾಖಲಿಸಿದ್ದ ಆಲನಹಳ್ಳಿ ಠಾಣೆ ಪೆÇಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಕಳವು ಮಾಡಿದ್ದ ಆಭರಣ ಮತ್ತಿತರ ವಸ್ತುಗಳನ್ನು ಕೇರಳದ ಸುಲ್ತಾನ್‍ಬತೇರಿಯದ ಸೈಜು ಬತ್ತೇರಿ ಎಂಬಾತನಿಗೆ ಮಾರಾಟ ಮಾಡಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಕಳ್ಳತನವಾಗಿದ್ದ ಆಭರಣ ಹಾಗೂ ವಸ್ತುಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಆಲನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಮಂಜು ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ