ಮೇಲಿನಿಂದ ಬಂಧರೆ ಗಂಗಾಜಲವೂ ಗಂಧೋದಕ

 

ಬೆಂಗಳೂರು, ಜು.12-ಮೇಲಿನಿಂದ ಬಂದರೆ ಅದು ಗಂಗಾಜಲ ಗಂಧೋದಕವಾಗುತ್ತದೆ ಎಂದು ಸಭಾಧ್ಯಕ್ಷ ರಮೇಶ್‍ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು.
ಖಾಸಗಿ ವಿಧೇಯಕ ಮಂಡನೆ ಸಂದರ್ಭದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಮಾತನಾಡಿ, ಎಂಜನಿಯರಿಂಗ್ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಎಐಸಿಟಿ ಮೆಡಿಕಲ್ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಪರಿಷತ್ತು, ಪದವಿ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಅನುಮತಿ ಕೊಡಬೇಕು ಎಂದರು.
ಆಗ ಮಧ್ಯ ಪ್ರವೇಶಿಸಿದ ಸ್ಪೀಕರ್, ಹೌದು. ಮೇಲಿರುವವು ಗಂಗೋತ್ರಿಗಳು, ಅಲ್ಲಿಂದ ಬಂದರೆ ಗಂಗಾಜಲವಾಗುತ್ತದೆ. ತಲೆ ಮೇಲೆ ಗಂಗೋಧಕವನ್ನು ಪ್ರೋಕ್ಷಣೆ ಮಾಡಿಕೊಂಡರೆ ಪವಿತ್ರವಾಗುತ್ತದೆ ಎಂದು ನುಡಿದರು.
ಮತ್ತೆ ಮಾತು ಮುಂದುವರೆಸಿದ ಸಿ.ಟಿ.ರವಿ, ಇಲ್ಲಿರುವವರೂ ಕೆಟ್ಟಿದ್ದರೆ, ಅಲ್ಲಿರುವವರೂ ಕೆಟ್ಟಿರುತ್ತಾರೆ ಎಂದಾಗ ಆ ವಿಚಾರದ ಚರ್ಚೆಗೆ ತೆರೆಬಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ