ಸಿಸಿಬಿ ಪೆÇಲೀಸರ ಕಾರ್ಯಾಚರಣೆ

ಮೈಸೂರು, ಜು.12-ನಗರದ ಸಿಸಿಬಿ ಪೆÇಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯೊಬ್ಬನನ್ನು ಬಂಧಿಸಿ 1.50ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಊಟಗಳ್ಳಿ ಹೊಸಬಡಾವಣೆಯ ಕುಂಟಮ್ಮ ದೇವಾಲಯ ರಸ್ತೆ ನಿವಾಸಿ ರವಿಕುಮಾರ್ (29) ಬಂಧಿತ ಆರೋಪಿ. ಈತನನ್ನು ಶ್ರೀರಾಮಪುರದ ಟಿಆರ್‍ಎಸ್ ಹೊಟೇಲ್ ಬಳಿ ಬೈಕ್ ಕಳವು ಮಾಡುವಾಗ ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆಗೊಳಪಡಿಸಿದಾಗ ಇತರೆ ಕಳವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಆತನ ಬಳಿ ಇದ್ದ ಐದು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಕೀ ಬಳಸಿ ವಾಹನ ಕಳವು ಮಾಡುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಸಿಸಿಬಿಯ ಇನ್ಸ್‍ಪೆಕ್ಟರ್ ಜಗದೀಶ್, ಎಎಸ್‍ಐಗಳಾದ ಚಂದ್ರೇಗೌಡ, ಅಲೆಗ್ಸಾಂಡರ್ ಹಾಗೂ ಸಿಬ್ಬಂದಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ