ಬೆಂಗಳೂರು, ಜು.7- ಭೇಟಿಗೆ ಅವಕಾಶ ನೀಡುವಂತೆ ಡಿವೈಎಸ್ಪಿಯೊಬ್ಬರು ರಾಜ್ಯ ಪೆÇಲೀಸ್ ಮಹಾನಿರ್ದೇಶಕರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಅರಣ್ಯಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಡಿವೈಎಸ್ಪಿಯೊಬ್ಬರು ತಮ್ಮ ನೋವುಗಳನ್ನು ಹೇಳಿಕೊಳ್ಳಲು ಅವಕಾಶ ಕೊಡಬೇಕೆಂದು ಪತ್ರದಲ್ಲಿ ಕೋರಿದ್ದಾರೆ.
ತಮ್ಮ ಅಳಲನ್ನು ಹೇಳಿಕೊಳ್ಳಲು ಈ ಹಿಂದೆ ಹಲವು ಸಲ ಕೋರಿದ್ದರೂ ಅವಕಾಶ ಸಿಕ್ಕಿರಲಿಲ್ಲ. 2017ರ ಡಿಸೆಂಬರ್ನಿಂದ ಇದುವರೆಗೆ ನಾಲ್ಕು ಪತ್ರಗಳನ್ನು ರವಾನಿಸಿದ್ದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಜೂ.18ರಂದು ಮತ್ತೊಂದು ಪತ್ರವನ್ನು ಡಿಜಿ-ಐಜಿಪಿ ಅವರಿಗೆ ಬರೆದಿದ್ದಾರೆ ಎಂದು ತಿಳಿದು ಬಂದಿದೆ.