ಮನೆಗೆ ಕರೆದೊಯ್ದು ಬೆದರಿಸಿ ದರೋಡೆ

 

ಬೆಂಗಳೂರು, ಜು.5- ಮನೆಗಳಿಗೆ ವಾಟರ್ ಫಿಲ್ಟರ್ ಅಳವಡಿಸುವ ಸರ್ವೀಸ್ ಮಾಡುವ ವ್ಯಕ್ತಿಯನ್ನು ಮನೆಗೆ ಕರೆದೊಯ್ದು ಬೆದರಿಸಿ 15 ಸಾವಿರ ಹಣ ಹಾಗೂ ಮೊಬೈಲ್ ದರೋಡೆ ನಡೆಸಿರುವ ಘಟನೆ ನಂದಿನಿ ಲೇಔಟ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೊನ್ನೆ ಮಧ್ಯಾಹ್ನ 12.30ರ ಸಮಯದಲ್ಲಿ ವಾಟ್ ಫಿಲ್ಟರ್ ಅಳವಡಿಸುವ ಗಣಪತಿ ಎಂಬುವರು ಅಂಗಡಿ ಬಳಿ ಮಾತನಾಡುತ್ತ ನಿಂತಿದ್ದರು.
ಈ ವೇಳೆ ಒಬ್ಬಾತ ಇವರ ಬಳಿ ಬಂದು ನಮ್ಮ ಮನೆಯಲ್ಲಿ ವಾಟರ್ ಫಿಲ್ಟರ್ ಅಳವಡಿಸಬೇಕು ಬನ್ನಿ ಎಂದು ಇವರನ್ನು ಕರೆದಿದ್ದಾನೆ.
ಈ ವ್ಯಕ್ತಿಯ ಮಾತನ್ನು ನಂಬಿ ಹೋಗಿದ್ದ ಗಣಪತಿಯನ್ನು ಮನೆಯಲ್ಲಿ ಕೂಡಿ ಹಾಕಿ ಬೆದರಿಸಿ 15 ಸಾವಿರ ಹಣ ಹಾಗೂ ಮೊಬೈಲ್ ಕಸಿದುಕೊಂಡು ವಾಪಸ್ ಕಳುಹಿಸಿದ್ದಾರೆ.
ಗಣಪತಿ ತಾನು ಮೋಸ ಹೋಗಿದ್ದನ್ನು ಅರಿತು ನಂದಿನಿ ಲೇಔಟ್ ಪೆÇಲೀಸರಿಗೆ ದೂರು ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ