ಕ್ಯಾಬ್ ಚಾಲಕನ ಮೇಲೆ ದಾಳಿ

 

ಬೆಂಗಳೂರು, ಜು.4-ಬಾರ್‍ನಿಂದ ಹೊರಗೆ ಬರುತ್ತಿದ್ದ ಕ್ಯಾಬ್ ಚಾಲಕನ ಮೇಲೆ ಗುಂಪೆÇಂದು ದಾಳಿ ಮಾಡಿ ಹಲ್ಲೆ ನಡೆಸಿರುವ ಘಟನೆ ಗಿರಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈರಣ್ಣನಗುಡ್ಡೆ ನಿವಾಸಿ ಅಂದಾನಿ ಎಂಬಾತ ಹಲ್ಲೆಯಿಂದ ಗಾಯಗೊಂಡಿದ್ದು, ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುನೇಶ್ವರ ಬ್ಲಾಕ್, 50 ಅಡಿ ರಸ್ತೆಯಲ್ಲಿನ ಬಾರ್‍ಗೆ ರಾತ್ರಿ ಕ್ಯಾಬ್ ಚಾಲಕ ಅಂದಾನಿ ಹೋಗಿದ್ದು, 12.30ರಲ್ಲಿ ಬಾರ್‍ನಿಂದ ಹೊರಗೆ ಬರುವುದನ್ನೇ ಕಾದು ಕುಳಿತಿದ್ದ ಗುಂಪು ಏಕಾಏಕಿ ದಾಳಿ ಮಾಡಿ ಹಲ್ಲೆ ನಡೆಸಿ ಪರಾರಿಯಾಗಿದೆ.
ತಲೆಗೆ ತೀವ್ರ ಪೆಟ್ಟಾದ್ದರಿಂದ ಮೊದಲು ಈತನಿಗೆ ನಿಮ್ಹಾನ್ಸ್‍ನಲ್ಲಿ ಚಿಕಿತ್ಸೆ ಕೊಡಿಸಿ ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಗಿರಿನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ