ವ್ಯೆಕ್ತಿಯ ಮೇಲೆ ಬಸ್ ಹರಿದು ಸಾವು

ಕೊಳ್ಳೆಗಾಲ, ಜು.4- ಅಂಗಡಿ ಮುಂದೆ ಮಲಗಿದ್ದ ವ್ಯಕ್ತಿಯೊಬ್ಬರ ಮೇಲೆ ಕೆಎಸ್‍ಆರ್‍ಟಿಸಿ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಇಂದು ಮುಂಜಾನೆ ಸಂಭವಿಸಿದೆ. ಮೃತನ ವಿಳಾಸ ತಿಳಿದು ಬಂದಿಲ್ಲ. ಆದರೆ ಮೃತ ವ್ಯಕ್ತಿಯನ್ನು ಅಕ್ಕ-ಪಕ್ಕದ ಗ್ರಾಮದ ವ್ಯಕ್ತಿಯಾಗಿರಬೇಕು ಅಥವಾ ಹೊರಗಿನ ವ್ಯಕ್ತಿಯಾಗಿರಬೇಕು. ಮುಂಜಾನೆ ಎಲ್ಲೋ ಹೋಗಲು ಬಸ್ ಏರಲು ಬಂದಿದ್ದ ವೇಳೆ ಘಟನೆ ಸಂಭವಿಸಿರಬೇಕು ಎಂದು ತಿಳಿದು ಬಂದಿದೆ. ಪಟ್ಟಣದ ಹಳೆಯ ಬಸ್ ನಿಲ್ದಾಣದ ಗಣೇಶ ದೇವಸ್ಥಾನದ ಎದುರಿನ ಮಹಾಲಕ್ಷ್ಮಿ ಲಾಡ್ಜ್‍ನ ಕಟ್ಟಡದ ರಾಜಧಾನಿ ಗೋಲ್ಡ್‍ನ ಅಂಗಡಿ ಮುಂಭಾಗ ಮಲಗಿದ್ದಾಗ ಇಂದು ಮುಂಜಾನೆ ಸುಮಾರು 3.30 ರ ಸಮಯದಲ್ಲಿ ಕೊಳ್ಳೆಗಾಲದಿಂದ ಬೆಂಗಳೂರಿಗೆ ತೆರಳಲು ಬಂದ ಕೆಎಸ್‍ಆರ್‍ಟಿಸಿ ಬಸ್ ಬಂದಿದೆ. ಬಸ್ ಚಾಲನೆ ಮಾಡುತ್ತಿದ್ದ ಚಾಲಕ ಬಸ್ ಅನ್ನು ಹಿಂದಕ್ಕೆ ಚಲಿಸಿದ್ದಾನೆ. ಈ ವೇಳೆ ಅಪರಿಚಿತ ವ್ಯಕ್ತಿಯ ಮೇಲೆ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಇಲ್ಲಿನ ಪಟ್ಟಣ ಠಾಣೆ ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ