ಯುವತಿ ಮೇಲೆ ಹಲ್ಲೆ ಪ್ರಕರಣ: ಒಬ್ಬನ ವಶ

ಮೈಸೂರು, ಜೂ.29- ಬಾರ್ ಅಂಡ್ ರೆಸ್ಟೋರೆಂಟ್‍ವೊಂದರಲ್ಲಿ ಯುವತಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜಯಲಕ್ಷ್ಮಿಪುರ ಠಾಣೆ ಪೆÇಲೀಸರು ಒಬ್ಬನನ್ನು ಬಂಧಿಸಿದ್ದಾರೆ. ದಿನೇಶ್‍ಗೌಡ ಬಂಧಿತ ಆರೋಪಿ. ಮಹಾಲಕ್ಷ್ಮಿ ಎಂಬುವವರ ಮೇಲೆ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ ಕಳೆದ ವಾರ ಉಮೇಶ್ ಎಂಬಾತ ಹಲ್ಲೆ ನಡೆಸಿದ್ದ. ಈ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಪೆÇಲೀಸರಿಗೆ ದಿನೇಶ್‍ಗೌಡ, ಉಮೇಶ್ ಹಾಗೂ ವಿವೇಕ್ ವಿರುದ್ಧ ದೂರು ನೀಡಿದ್ದರು. ತನಿಖೆ ಕೈಗೊಂಡ ಪೆÇಲೀಸರು ಈ ಮೂವರಲ್ಲಿ ದಿನೇಶ್‍ಗೌಡನನ್ನು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ