ಎತ್ತಿನ ಓಟದಲ್ಲಿ ಮೂವರಿಗೆ ಗಾಯ

ಕಲಬುರಗಿ, ಜೂ.29 – ಎತ್ತು ಕೊಂಬಿನಿಂದ ಇರಿದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೇಡಂ ತಾಲೂಕಿನ ಮುಧೋಳದಲ್ಲಿ ಇಂದು ನಡೆದಿದೆ. ಕಾರ ಹುಣ್ಣಿಮೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಎತ್ತಿನ ಓಟದಲ್ಲಿ ಪಾಲ್ಗೊಂಡಿದ್ದ ಮುಧೋಳ ನಿವಾಸಿಗಳಾದ ಶರಣ್‍ಕುಮಾರ್, ಆನಂದ್ ಹಾಗೂ ಮತ್ತೊಬ್ಬರಿಗೆ ಎತ್ತು ಕೊಂಬಿನಿಂದ ತಿವಿದು, ಕಾಲಿನಿಂದ ತುಳಿದು ತೀವ್ರ ಗಾಯಗೊಳಿಸಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ