ನಿವೇಶನ ತೋರಿಸುವ ನೆಪದಲ್ಲಿ ಮಹಿಳೆಯ ಕೊಲೆ

ಮೈಸೂರು, ಜೂ.28-ನಿವೇಶನ ತೋರಿಸುವ ನೆಪದಲ್ಲಿ ಮಹಿಳೆಯನ್ನು ಕರೆದೊಯ್ದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ರಿಯಲ್‍ಎಸ್ಟೇಟ್ ಏಜೆಂಟ್‍ನೊಬ್ಬನನ್ನು ನಗರದ ನಜರ್‍ಬಾದ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಕೆ.ಆರ್.ನಗರ ಮೂಲದ ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಕೀರ್ತಿಕುಮಾರ್ (40) ಬಂಧಿತ ಆರೋಪಿ. ಕೀರ್ತಿಕುಮಾರ್ ನಗರದ ಸಿದ್ದಾರ್ಥ ಬಡಾವಣೆ ವಾಸಿ ಬೆಂಗಳೂರಿನ ಬಿಬಿಎಂಪಿ ಇಂಜನಿಯರ್ ಉಮೇಶ್ ಅವರ ಪತ್ನಿ ಮಹಾಲಕ್ಷ್ಮೀ (54) ಎಂಬುವರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ. ಮಹಿಳೆ ಮೊಬೈಲ್‍ನ ಜಾಡನ್ನು ಹಿಡಿದು ಆತನನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ. ಮಹಾಲಕ್ಷ್ಮಿ ಅವರು ಮೇ 27ರಂದುಮನೆಯಿಂದ ಹೊರ ಹೋಗಿದ್ದು, ಹಿಂದಿರುಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಕೆ ಪತಿ ಉಮೇಶ್ ನಜರ್‍ಬಾದ್ ಠಾಣೆಗೆ ಪತ್ನಿ ಕಾಣೆ ಆಗಿರುವ ಬಗ್ಗೆ ದೂರು ನೀಡಿದ್ದರು.
ಮಹಾಲಕ್ಷ್ಮಿ ಅವರಿಗೆ ನಿವೇಶನ ಕೊಡಿಸುವುದಾಗಿ ಹೇಳಿ ಕರೆದೊಯ್ದಿದ್ದ ಆರೋಪಿಯು ನಂತರ ಕಮಿಷನ್ ವಿಷಯವಾಗಿ ಕ್ಯಾತೆ ತೆಗೆದಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೀರ್ತಿಕುಮಾರ್, ಮಹಾಲಕ್ಷ್ಮಿ ಅವರ ಕೆನ್ನೆಗೆ ಹೊಡೆದಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು.
ನಂತರ ಆಕೆಯ ಶವವನ್ನು ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಕೊಲಂಬಿಯ ಏಷ್ಯಾ ಆಸ್ಪತ್ರೆ ಸಮೀಪದ ಪೆÇದೆಯೊಂದರಲ್ಲಿ ಆರೋಪಿ ಬಿಸಾಡಿ ಹೋಗಿದ್ದನೆಂದು ಪೆÇಲೀಸರು ತಿಳಿಸಿದ್ದಾರೆ.
ಮೊನ್ನೆ ಈ ಸ್ಥಳದಲ್ಲಿ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪೆÇಲೀಸರು ಪರಿಶೀಲಿಸಿದಾಗ ಮೃತದೇಹ ಕಂಡು ಬಂದಿತ್ತು.
ಅನುಮಾನಸ್ಪದವಾಗಿ ಓಡಾಡುತ್ತಿದ್ದ ಕೀರ್ತಿಕುಮಾರ್‍ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮಹಾಲಕ್ಷ್ಮಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ