ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಿಂದ ನಾಲ್ವರು ಮಕ್ಕಳು ಪರಾರಿ

ಮೈಸೂರು, ಜೂ.28- ನಗರದಲ್ಲಿರುವ ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಿಂದ ನಾಲ್ವರು ಮಕ್ಕಳು ಪರಾರಿಯಾಗಿದ್ದಾರೆ. ತಿಲಕ ನಗರದಲ್ಲಿರುವ ಶಾಲೆಯಿಂದ ಸೋನುಕುಮಾರ್, ರಾಜ್‍ಮಜೀದ್, ಮೋಹನ್ ಹಾಗೂ ದಾಮು ಪರಾರಿಯಾಗಿರುವ ಮಕ್ಕಳು. ಶಾಲೆಯ ಶೌಚಾಲಯದ ಕಿಟಕಿ ಸರಳುಗಳನ್ನು ಮುರಿದು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಶಾಲೆಯ ಮುಖ್ಯಸ್ಥರು ಮಂಡಿ ಠಾಣೆಗೆ ದೂರು ನೀಡಿದ್ದಾರೆ. ಈ ವಿದ್ಯಾರ್ಥಿಗಳೆಲ್ಲರೂ 15ರಿಂದ 17 ವರ್ಷದ ವಯಸ್ಸಿನವರಾಗಿದ್ದು, ಪೆÇೀಷಕರು ಇಲ್ಲ ಎಂದು ಪೆÇಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳ ಹುಡುಕಾಟಕ್ಕೆ ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ