ಕುಡಿದ ಅಮಲಿನಲ್ಲಿ ಮೋರಿಗೆ ಬಿದ್ದ ಯುವಕ ಸಾವು

ಮೈಸೂರು,ಜೂ.27- ಕುಡಿದ ಅಮಲಿನಲ್ಲಿ ಮೋರಿಗೆ ಬಿದ್ದು ಯುವಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಶ್ರೀರಾಂಪುರ ವಾಸಿ ರವಿಚಂದ್ರ(25) ಮೃತ ಯುವಕ. ಈತ ವೃತ್ತಿಯಲ್ಲಿ ಪೇಂಟರ್. ನಿನ್ನೆ ಸರಿರಾತ್ರಿವರೆಗೂ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಮನೆಗೆ ಹೊರಟಿದ್ದ. ಮೈಸೂರು ಎಚ್‍ಡಿಕೋಟೆ ಮುಖ್ಯರಸ್ತೆಯ ಚರಂಡಿಗೆ ಬಿದ್ದು ಈತ ಸಾವನ್ನಪ್ಪಿದ್ದಾನೆ. ಮೋರಿ ಬಳಿ ನಾಯಿಗಳು ಬೊಗಳುತ್ತಿದ್ದುದನ್ನು ಕಂಡು ವಾಯುವಿಹಾರಿಗಳು ಹೋಗಿ ನೋಡಿದಾಗ ಈತನ ದೇಹ ಮೋರಿಯಲ್ಲಿದ್ದುದು ಗೊತ್ತಾಗಿ ಪೆÇಲೀಸರಿಗೆ ತಿಳಿಸಿದ್ದಾರೆ. ಅಶೋಕಪುರಂ ಪೆÇಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮೈಸೂರು ಮೆಡಿಕಲ್ ಕಾಲೇಜಿಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ