ಕಾರಿನ ಗಾಜು ಹೊಡೆದು ದಾಖಲೆ ಕಳವು

ದಾವಣಗೆರೆ,ಜೂ.27- ನಿಲ್ಲಿಸಿದ್ದ ಕಾರಿನ ಹಿಂಬದಿಯ ಗಾಜು ಹೊಡೆದು ಹಾಗೂ ದಾಖಲೆಗಳನ್ನು ಕಳವು ಮಾಡಿರುವ ಘಟನೆ ಗಾಂಧಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಉಪನೋಂದಣಾಧಿಕಾರಿ ಕಚೇರಿ ಬಳಿ ಬ್ಯಾಂಕ್‍ನ ಸಮೀಪ ನಿಲ್ಲಿಸಿದ್ದ ಕಾರಿನಿಂದ ಹಣ ದೋಚಲಾಗಿದೆ. ಕಂದಗಲ್‍ನವರಾದ ಕೆ.ಬಿ.ರಾಜಪ್ಪ ಜಮೀನು ಖರೀದಿಸಿದ್ದು, ಅದರ ನೋಂದಣಿಗಾಗಿ ನಗರದ ನೋಂದಣಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು. ತಾವು ತಂದ ಹಣ ಮತ್ತು ದಾಖ¯ಯನ್ನುಕಾರಿನಲ್ಲಿರಿಸಿ ಮತ್ತಷ್ಟು ಹಣ ಡ್ರಾ ಮಾಡಿಕೊಂಡು ಬರಲು ಬ್ಯಾಂಕ್‍ಗೆ ತೆರಳಿದ್ದಾಗ ಕಳ್ಳರು ಕೈಚಳಕ ತೋರಿದ್ದಾರೆ. ಈ ಸಂಬಂಧ ಗಾಂಧಿನಗರ ಠಾuಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ