ಅಂತರ್ ಜಿಲ್ಲಾ ದ್ವಿಚಕ್ರ ಕಳ್ಳರ ಬಂಧನ

ಚಿಕ್ಕಮಗಳೂರು,ಜೂ.22- ಮೂವರು ಅಂತರ್ ಜಿಲ್ಲಾ ದ್ವಿಚಕ್ರ ಕಳ್ಳರನ್ನು ಪೆÇಲೀಸರು ಬಂಧಿಸಿ ಏಳು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಕಿಣರ್(20), ಬಳ್ಳಾರಿಯ ಸುರೇಶ್(20), ಬಿರೂರಿನ ಮನೋಜ್(20)ಬಂಧಿತರು. ನಗರದ ಎಐಟಿ ಕಾಲೇಜು ಬಳಿ ಮೂವರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದನ್ನುಕಂಡ ನಗರ ಪೆÇಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಕಲಿ ಕೀ ಬಳಸಿ ಬೈಕ್‍ಗಳನ್ನು ಕದ್ದು ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದು, ಬಂಧಿತರಿಂದ 2.65 ಲಕ್ಷ ಮೌಲ್ಯದ ಏಳು ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರ ಠಾಣೆ ಪಿಎಸ್‍ಐ ರಕ್ಷಿತ,ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ಗಿರೀಶ್, ಯುವರಾಜ್, ಶಶಿಧರ್,ಮಧುಕುಮಾರ್ ಅವರನ್ನು ಜಿಲ್ಲಾ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಶಂಶಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ