ಗಾಂಧಿ ಕುಟುಂಬದಷ್ಟು ದ್ವೇಷದ ರಾಜಕಾರಣ ಬಿಜೆಪಿ ಮಾಡಿಲ್ಲ: ಸಂಸದ ಜೋಶಿ

ಹುಬ್ಬಳ್ಳಿ- ಇಂದಿರಾಗಾಂಧಿ ಕುಟುಂದವರಷ್ಟು ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿಯವರು ಸಚಿವ ಡಿ.ಕೆ ಶಿವಕುಮಾರ ಅವರಿಗೆ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಹಾಗೂ ಕೇಂದ್ರ ಸರ್ಕಾರ ದ್ವೇಷದಿಂದ ತಮ್ಮ‌ನಿವಾಸದ ಮೇಲೆ ಐಟಿ ದಾಳಿ ನಡೆಸಿದ್ದಾರೆ ಎಂಬ ಡಿ ಕೆ ಶಿವಕುಮಾರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಡಿ ಕೆ ಶಿವಕುಮಾರ ಮನೆಯಲ್ಲಿ ಅಕ್ರಮ ಹಣ ಸಿಕ್ಕಿದ್ದಕೆ ಮತ್ತು ಹವಾಲಾ ಜಾಲ ಉಪಯೋಗಿಸಿರುವದರ ಕುರಿತು ಸಾಕ್ಷಾಧಾರಗಳು ಸಿಕ್ಕಿವೆ. ಐಟಿ ಹಾಗೂ ಇಡಿ ಇಷ್ಟೆಲ್ಲ ಸಿಕ್ಕ ಮೇಲೆ ತನಿಖೆ ನಡೆಸಬೇಕವಾ ಬೇಡವೋ ಎಂದು ಪ್ರಶ್ನಿಸಿದರು. ತಮ್ಮ ಬಳಿ ಇಷ್ಟೆಲ್ಲ ಆಸ್ತಿ ಹೇಗೆ ಬಂತು ಹೇಳಿ ಎಂದು ಡಿಕೆಶಿ ಗೆ ಸವಾಲು ಹಾಕಿದರು. ಚುನಾವಣಾ ಪೂರ್ವದಲ್ಲಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ ಹಾವು ಮುಂಗುಸಿಯಂತೆ ಕಾದಾಡಿದರು. ಈಗ ಕುಮಾರಸ್ವಾಮಿ ಅವರು ಡಿ‌ಕೆ ಶಿವಕುಮಾರ ಅವರನ್ನು ಬೆಂಬಲಿಸಿದ್ದಾರೆ. ಇದು ಬರೀ ಮೇಲ್ನೋಟದ ಬೆಂಬಲ ನಿಜವಾಗಿಯೂ ಅವರನ್ನು ಯಾವಾಗ ಕೈ ಬಿಡಬೇಕು ಎನ್ನುವ ಅವಕಾಶಕ್ಕೆ ಕುಮಾರಸ್ವಾಮಿ ಕಾಯುತ್ತಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ